About the Author

ಬರಹಗಾರ, ಪ್ರಾಧ್ಯಾಪಕರಾದ ಖಾಜಾವಲಿ ಈಚನಾಳ ಅವರು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಈಚನಾಳ ಗ್ರಾಮದವರು. ಗುಲ್ಬರ್ಗ ವಿಶ್ವವಿದ್ಯಾಲಯದಿಂದ ಕನ್ನಡ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ‘ವಿಮೋಚನಾ ಪೂರ್ವ ಹೈದರಾಬಾದ್ ಕರ್ನಾಟಕ ಭಾಷಿಕ ಹೋರಾಟಗಳು’ ವಿಷಯದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. 

ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿ ನಿರ್ವಹಿಸುತ್ತಿದ್ದಾರೆ. ಹವ್ಯಾಸಿ ಪತ್ರಕರ್ತನಾಗಿಯೂ ಕೆಲಸ ಮಾಡಿರುವ ಇವರು ಹಲವಾರು ದಿನಪತ್ರಿಕೆಗಳಿಗೆ ಕತೆ, ಕಾವ್ಯ, ಲೇಖನಗಳನ್ನು ಬರೆದಿದ್ದಾರೆ. ಕನ್ನಡ ಸಾಹಿತ್ಯ ಚಟುವಟಿಕೆಯಲ್ಲಿಯೂ ತೊಡಗಿಸಿಕೊಂಡಿರುವ ಇವರು ಚಿ..ಜ್ಯೋತಿ, ರಂಗಸಂಗಮ, ಹೊಳಿ ದಂಡಿಯ ದುಂಡು ಮಲ್ಲಿಗೆ, ರಾಯಚೂರು ಜಿಲ್ಲಾ ರಂಗ ಮಾಹಿತಿ ಇವರು ರಚಿಸಿದ ಪ್ರಮುಖ ಕೃತಿಗಳು. 

ಇವರಿಗೆ ಮಹಾತ್ಮ ಜ್ಯೋತಿ ಭಾ ಫುಲೆ, ಶರಣ ಚೇತನ ಪುರಸ್ಕಾರಗಳು ಸಂದಿವೆ. 

ಖಾಜಾವಲಿ ಈಚನಾಳ