About the Author

ಕಿರಣ್ ಕುಮಾರ್ ಎಸ್. ಕೆ ಅವರು ಕೋಲಾರ ಜಿಲ್ಲೆಯ ಮಾಲೂರಿನಲ್ಲಿ, ಕೃಷ್ಣಮೂರ್ತಿ, ಸುನಂದ ದಂಪತಿಯ ಪುತ್ರ. ಪ್ರಾರ್ಥಮಿಕ, ಪ್ರೌಢ ಶಿಕ್ಷಣವನ್ನು ಕೋಲಾರಿನಲ್ಲಿ ಪಡೆದು, ಅನಂತರ ಪದವಿ ಪೂರ್ವ ಶಿಕ್ಷಣವನ್ನು ಕೋಲಾರ ಚಿನ್ನದ ಗಣಿ(KGF) ಯಲ್ಲಿ ಪೂರ್ಣಗೊಳಿಸಿದರು. ವಿಶ್ವೇಶ್ವರಯ್ಯ ಕಾಲೇಜು ಆಫ್ ಇಂಜಿನಿಯರಿಂಗ್ ವಿಶ್ವವಿದ್ಯಾಲಯದಲ್ಲಿ ಸ್ನಾತಕ ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನ ರಾಜ್ಯದ ಪ್ರತಿಷ್ಠಿತ ಕರಾವಳಿ ಭಾಗದ ಸೂರತ್ಕಲ್ ನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ಸದ್ಯ ಐ. ಬಿ. ಎಂ ಕಂಪನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ.

"ರೇಸ್ ಆಫ್ ಎಕ್ಸ್ಪ್ರೇಶನ್ಸ್(Rays of Expressions)" ಎಂಬ ಆಂಗ್ಲ ಕವನ ಸಂಕಲನದ ಮೂಲಕ ಈಗಾಗಲೇ ಜಾಗತಿಕ ಸಾಹಿತ್ಯದಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಕಿರಣ್ ಕುಮಾರ್ ಎಸ್. ಕೆ, ಕನ್ನಡ ಸಾರಸ್ವತ ಸಾಹಿತ್ಯ ಲೋಕದಲ್ಲಿ ಮೊದಲ ಕಾವ್ಯಯಾನವನ್ನು "ನನ್ನೊಡಲ ಬೆಳಗು" ಕವನ ಸಂಕಲನದ ಮೂಲಕ ಪಾದಾರ್ಪಣೆ ಮಾಡಿದ್ದಾರೆ.

 

ಕಿರಣ್ ಕುಮಾರ್ ಎಸ್.ಕೆ