About the Author

ಕೃಷ್ಣಕವಿ ಎಂಬ ಕಾವ್ಯನಾಮದ ಕೃಷ್ಣಮೂರ್ತಿ.ಎಸ್ ಅವರು ಕಳೆದ ಎರಡು ದಶಕಗಳಿಂದ ಕಾವ್ಯವನ್ನೇ ಉಸಿರಾಗಿಸಿಕೊಂಡವರು. ವೃತ್ತಿಯಿಂದ ಸಾಫ್ಟ್ ವೇರ್ ತಜ್ಞರಾಗಿರುವ ಇವರು ಸಾಹಿತ್ಯ ಮತ್ತು ಛಾಯಾಗ್ರಹಣವನ್ನು ತಮ್ಮ ಆಸಕ್ತಿಯ ಕ್ಷೇತ್ರವಾಗಿಸಿಕೊಂಡಿದ್ದಾರೆ. ಕನ್ನಡದಲ್ಲಿ ಮೊದಲಬಾರಿಗೆ ತಾವು ತೆಗೆದ ಐವತ್ತು ವರ್ಣಚಿತ್ರಗಳಿಗೆ ಕವನವನ್ನು ಹೆಣೆದು ದೃಶ್ಯ-ಕಾವ್ಯ ಎಂಬ ವಿಶಿಷ್ಟ ಸಂಕಲನವನ್ನು ಹೊರತಂದರು. ಇದೀಗ ‘ಸ್ವಾತಿ-ಮುತ್ತುಗಳು’ ಎಂಬ ಮುಕ್ತಕ ಸಂಕಲನವನ್ನು ಪ್ರಕಟಿಸಿದ್ದಾರೆ.

ಕೃತಿಗಳು: ದೃಶ್ಯ-ಕಾವ್ಯ , ಸ್ವಾತಿ-ಮುತ್ತುಗಳು

ಕೃಷ್ಣಕವಿ (ಕೃಷ್ಣಮೂರ್ತಿ.ಎಸ್)