About the Author

ಗಾಂಧಿವಾದಿ, ಸಾಹಿತಿ ಕೃಷ್ಣಕುಮಾರ ಕಲ್ಲೂರ ಅವರು 1909 ಡಿಸೆಂಬರ್‌ 21ರಂದು ಜನಿಸಿದರು. ಗದಗ ಜಿಲ್ಲೆಯ ಕಲ್ಲೂರ ಇವರ ಹುಟ್ಟೂರು. ತಾಯಿ ರಾಧಾಬಾಯಿ, ತಂದೆ ಅನಂತರಾವ್‌. ಮಾಧ್ಯಮಿಕ ಶಾಲಾ ಶಿಕ್ಷಕರಾಗಿ ವೃತ್ತಿ ಆರಂಭಸಿದ ಇವರು ಗುಜರಾತಿನ ಪಾಡ್ರಾ ಹಾಗೂ ಬರೋಡದಲ್ಲಿ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಕಾಲೇಜು ದಿನಗಳಲ್ಲಿಯೇ ಕತೆ ರಚನೆಯಲ್ಲಿ ತೊಡಗಿಸಿಕೊಂಡಿದ್ದ ಇವರ ಹಲವು ಕತೆಗಳು ವಿವಿಧ ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಜಯಕರ್ನಾಟಕ ಸಮರ್ಪಣ ಗೀತೆಗಳು, ಮಧುರ ಗಂಗೋತ್ರಿ, ತಿರುಗುಪ್ಪ, ಜಾಗೃತ ರಾಷ್ಟ್ರ ಇವರ ಪ್ರಮುಖ ಕೃತಿಗಳು. ಇವರು 1982ರಲ್ಲಿ ನಿಧನರಾದರು.  

ಕೃಷ್ಣಕುಮಾರ ಕಲ್ಲೂರ

(21 Dec 1909)

Books by Author