About the Author

ಎಂ.ಎಸ್. ರುದ್ರೇಶ್ವರ ಸ್ವಾಮಿ ಅವರು ಮೂಲತಃ ದಾವಣಗೆರೆಯವರು. ಮೈಸೂರು ವಿ.ವಿಯಿಂದ ಸ್ನಾತಕೋತ್ತರ ಪದವೀಧರರು. ಅಂಚೆ ಇಲಾಖೆಯಲ್ಲಿ ಸಲ್ಲಿಸಿದ ಸೇವಾ ರೀತಿಗೆ ಡಾಕ್ ಸೇವಾ ಪ್ರಶಸ್ತಿ ಪುರಸ್ಕೃತರು. ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಸ್ವಯಂನಿವೃತ್ತಿ(2009)  ಪಡೆದಿದ್ದಾರೆ. 

ಅವರ ಮೊದಲ ಕವನ ಸಂಗ್ರಹ ‘ಪ್ರೀತಿ ಮತ್ತು ನೀರು’ಗೆ ಶಿವಮೊಗ್ಗ ಕರ್ನಾಟಕ ಸಂಘದ ಜಿ.ಎಸ್.ಎಸ್ ಪ್ರಶಸ್ತಿ, ಎರಡನೇ ಕವನ ಸಂಗ್ರಹ ‘ಆ ತೀರದ ಮೋಹ’ಕ್ಕೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ, ಪು.ತಿ.ನ ಪ್ರಶಸ್ತಿ ಮತ್ತು ಶೂದ್ರ ಪತ್ರಿಕೆ ನೀಡುವ ಜಿ.ಎಸ್.ಎಸ್ ಕಾವ್ಯ ಪ್ರಶಸ್ತಿಗಳು ಹಾಗೂ ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ಪ್ರಾಯೋಜಕತ್ವದ 2015ರ ಸಾಲಿನ ಮುದ್ದಣ ಕಾವ್ಯ ಪ್ರಶಸ್ತಿಯು ಇವರ ‘ಅವಳ ಕವಿತೆ’ ಕವನಸಂಕಲನದ ಹಸ್ತಪ್ರತಿಗೆ ದೊರೆತಿದೆ.

ಎಂ.ಎಸ್. ರುದ್ರೇಶ್ವರಸ್ವಾಮಿ