About the Author

ಕವಿ ಮಹಾಂತಪ್ಪ ನಂದೂರ ಅವರು ಕಲಬುರಗಿ ತಾಲೂಕಿನ ’ಪಟ್ಟಣ ’ದಲ್ಲಿ(1965) ಜನಿಸಿದರು. ಗ್ರಾಮೀಣ ಹಿನ್ನೆಲೆಯ ಇವರಿಗೆ ಆಧುನಿಕ ಜಗತ್ತು ಸೃಷ್ಟಿಸುವ ತಲ್ಲಣಗಳು ಬಹುವಾಗಿ ಕಾಡುವ ವಿಷಯ. ‘ಉದಕದೊಳಗಣ ಬೆಂಕಿ, ದೂರದ ಪದ, ಜೀವ ಕೊಳಲು’ ಅವರ ಕವನ ಸಂಕಲನಗಳು. ‘ಕಲ್ಯಾಣವೆಂಬ ಪ್ರಣತಿ’ - ಸುನೀತ ಸಂಗ್ರಹ, ಆಯಿತಾರ ಅಮಾಸಿ - ಕಥಾ ಸಂಕಲನ, ಆನಂದ ನಿನಾದ - ವಿಮರ್ಶಾ ಲೇಖನ ಸಂಗ್ರಹ ಅವರ ಮತ್ತಿತರ ಕೃತಿಗಳು. ‘ಕಲ್ಯಾಣವೆಂಬ ಪ್ರಣತಿ’ ಸುನೀತ ಸಂಗ್ರಹ ಕೃತಿಗೆ ಡಾ. ಡಿ. ಎಸ್. ಕರ್ಕಿ ಕಾವ್ಯ ಪುರಸ್ಕಾರ ಹಾಗೂ ಅಮ್ಮ ಪ್ರಶಸ್ತಿ, ಅವರ ‘ಅರಿವೆ ಪ್ರಮಾಣು’ ಕವನ ಸಂಕಲನಕ್ಕೆ 2019 ನೇ ಸಾಲಿನ ‘ಮೋಹನ ಕುರುಡಗಿ ಕಾವ್ಯ ಪ್ರಶಸ್ತಿ’ಗೆ ಭಾಜನರಾಗಿದ್ಧಾರೆ.

ಮಹಾಂತಪ್ಪ ನಂದೂರ

Stories/Poems