About the Author

ಮಲ್ಲಿಕಾರ್ಜುನ ಸಿದ್ದಣ್ಣನವರ 1968ರ ಜುಲೈ 1 ರಂದು ಜನಿಸಿದರು. ಸದ್ಯ ಹುಬ್ಬಳ್ಳಿಯಲ್ಲಿ ವಾಸ. ಕನ್ನಡ ಪ್ರಭ ಪತ್ರಿಕೆಯ ಹುಬ್ಬಳ್ಳಿಯ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿದ್ದಾರೆ.ಎಂ.ಎ.ಪದವೀಧರರು. ಕರ್ನಾಟಕ ಟೈಮ್ಸ್ ಗೋಕಾಕ್, ಸಂಯುಕ್ತ ಕರ್ನಾಟಕ, ಕನ್ನಡಮ್ಮ ಹೀಗೆ ವಿವಿಧ ಪತ್ರಿಕೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ. 

ಪೂರ್ಣಚಂದ್ರ, ರಾಮಣ್ಣ ಮಾಸ್ಟರ್, ಬಾಗಲಕೋಟೆಯ ಲಡ್ಡುಮುತ್ಯಾ, ಕಾಲುದಾರಿ, ಅಂತರಾಳ (ಕವನ ಸಂಕಲನ), ಜಗಕೆ ಜೋಗುಳ ಹಾಡಿದ ತಾಯಿ, ಬೈನಾ (ಕಾದಂಬರಿ) ಸುಪ್ರಭಾತ ಕವಿ ಗಂಗಪ್ಪ ವಾಲಿ, ಕಂಬನಿ ಜಾರಿದ ಸದ್ದು, ನಾನು ಶಾಲ್ಮಲೆ ಇತ್ಯಾದಿ ಕೃತಿಗಳನ್ನು ಪ್ರಕಟಿಸಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಡಾ. ಪಾಟೀಲ್ ಪುಟ್ಟಪ್ಪ ಪತ್ರಿಕಾ ಪುರಸ್ಕಾರ, ಕೇರಳ ಶಾಂತ ಶ್ರಮದ ಅಂತಾರಾಷ್ಟ್ರೀಯ ಗೌರವ, ಕರ್ನಾಟಕ ಮಾಧ್ಯಮ ಪ್ರಶಸ್ತಿ, ಶಾವು ರತ್ನ ಪ್ರಶಸ್ತಿ, ಟಂಕ ಸಾಲಿ ಪುರಸ್ಕಾರ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ. 

ಮಲ್ಲಿಕಾರ್ಜುನ ಸಿದ್ದಣ್ಣವರ

(01 Jul 1968)