ಅನುಸಂಧಾನ

Author : ಮಲ್ಲಿಕಾರ್ಜುನ ಸಿದ್ದಣ್ಣವರ

Pages 184

₹ 140.00




Year of Publication: 2020
Published by: ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ
Address: ಡಾ.ಎಂ.ಎಂ.ಕಲಬುರ್ಗಿ ಅಧ್ಯಯನ ಸಂಸ್ಥೆ .ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠಗದಗ.
Phone: 9448144419

Synopsys

ಗದಗಿನ ತೋಂಟದಾರ್ಯ ಮಠದ ಡಾ: ಜಗದ್ಗುರು ತೋಂಟದಾರ್ಯ ಸ್ವಾಮಿಗಳ ಒಡನಾಟದ ಫಲವಾಗಿ ಮಲ್ಲಿಕಾರ್ಜುನ ಸಿದ್ದಣ್ಣವರ 'ಅನುಸಂಧಾನ' ಪುಸ್ತಕ ರಚನೆಗೆ ಪ್ರೇರಣೆ. ಸಾಮಾಜಿಕ ಕಳಕಳಿಯ ಪತ್ರಕರ್ತ ಹಾಗೂ ಸಮಾಜ ಶುದ್ಧಿ ಬಯಸುವ ಶ್ರೀಗಳು ಪರಸ್ಪರರಿಬ್ಬರ ಕರ್ತವ್ಯಗಳ ಅನುಸಂಧಾನವು ಆಗಿದೆ.

ಪತ್ರಿಕೆಗಳ ಮೂಲಕ ಸಾಮಾಜಿಕ ಸಮಸ್ಯೆಗೆ ಸ್ಪಂದಿಸುವ ಲೇಖಕರು ಹಾಗೂ ಅವುಗಳಿಗೆ ಸಾಧ್ಯವಾದಷ್ಟು ಪರಿಹಾರ ರೂಪವಾಗಿ ಶ್ರಮಿಸುವುದು ಶ್ರೀಗಳ ಸೇವೆ. ಇಂತಹ ಆಯ್ದ ವಿದ್ಯಮಾನಗಳ ಹಾಗೂ ಲೇಖನಗಳ ಸಂಗ್ರಹ -ಅನುಸಂಧಾನ. ಈ ಕೃತಿಯು 10 ಲೇಖನಗಳನ್ನು ಒಳಗೊಂಡಿದೆ. ಶರಣರ ಮಾನವೀಯತೆಯಡಿ (ಅಸ್ಪೃಶ್ಯತೆ, ಮೌಢ್ಯ-ಕಂದಾಚಾರಗಳ ವಿರೋಧಿ ಭಾವ ) ಶ್ರೀಗಳು ಸಾಮಾಜಿಕ ಸಮಸ್ಯೆಗಳಿಗೆ ಸ್ಪಂದಿಸಿದ ಲೇಖನಗಳು ಇಲ್ಲಿವೆ. ಪತ್ರಿಕಾ ಬರೆಹಗಳಾದರೂ ಸಂವೇದನಾಶೀಲವಾಗಿವೆ. ತೋಂಟದ ಸಿದ್ಧಲಿಂಗ ಶ್ರೀಗಳು ಈ ಕೃತಿಗೆ ಬೆನ್ನುಡಿ ಬರೆದು, ಮಾಧ್ಯಮದ ನಡೆಯು ಶರಣರ ಚಿಂತನೆಯನ್ನು ಅವಲಂಬಿಸಿರಬೇಕು ಎಂದೂ ಆಶಿಸಿದ್ದಾರೆ.   

About the Author

ಮಲ್ಲಿಕಾರ್ಜುನ ಸಿದ್ದಣ್ಣವರ
(01 July 1968)

ಮಲ್ಲಿಕಾರ್ಜುನ ಸಿದ್ದಣ್ಣನವರ 1968ರ ಜುಲೈ 1 ರಂದು ಜನಿಸಿದರು. ಸದ್ಯ ಹುಬ್ಬಳ್ಳಿಯಲ್ಲಿ ವಾಸ. ಕನ್ನಡ ಪ್ರಭ ಪತ್ರಿಕೆಯ ಹುಬ್ಬಳ್ಳಿಯ ಆವೃತ್ತಿಯ ಸ್ಥಾನಿಕ ಸಂಪಾದಕರಾಗಿದ್ದಾರೆ.ಎಂ.ಎ.ಪದವೀಧರರು. ಕರ್ನಾಟಕ ಟೈಮ್ಸ್ ಗೋಕಾಕ್, ಸಂಯುಕ್ತ ಕರ್ನಾಟಕ, ಕನ್ನಡಮ್ಮ ಹೀಗೆ ವಿವಿಧ ಪತ್ರಿಕೆಗಳಲ್ಲೂ ಸೇವೆ ಸಲ್ಲಿಸಿದ್ದಾರೆ.  ಪೂರ್ಣಚಂದ್ರ, ರಾಮಣ್ಣ ಮಾಸ್ಟರ್, ಬಾಗಲಕೋಟೆಯ ಲಡ್ಡುಮುತ್ಯಾ, ಕಾಲುದಾರಿ, ಅಂತರಾಳ (ಕವನ ಸಂಕಲನ), ಜಗಕೆ ಜೋಗುಳ ಹಾಡಿದ ತಾಯಿ, ಬೈನಾ (ಕಾದಂಬರಿ) ಸುಪ್ರಭಾತ ಕವಿ ಗಂಗಪ್ಪ ವಾಲಿ, ಕಂಬನಿ ಜಾರಿದ ಸದ್ದು, ನಾನು ಶಾಲ್ಮಲೆ ಇತ್ಯಾದಿ ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ, ಡಾ. ಪಾಟೀಲ್ ಪುಟ್ಟಪ್ಪ ಪತ್ರಿಕಾ ಪುರಸ್ಕಾರ, ...

READ MORE

Related Books