About the Author

ಬರವಣಿಗೆಯ ಆರಂಭಿಕ ಹೆಜ್ಜೆಯಲ್ಲೇ ಗಮನಸೆಳೆದಿರುವ ಲೇಖಕಿ ಮಂಗಳ. ಸಿ ಬಯಲು ಸೀಮೆ ಬದುಕಿನ ಅನುಭವಗಳಿಗೆ ಅಕ್ಷರ ರೂಪ ನೀಡಿದ ಬರಹಗಾರ್ತಿ.  ಕನ್ನಡ ಸಾಹಿತ್ಯ ಲೋಕಕ್ಕೆ ಸಕ್ಕರೆ ನಾಡು ಮಂಡ್ಯದ ನವಚಿಗುರು ಮಂಗಳ. ಸಿ. ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಕೊಡಿಗೆಹಳ್ಳಿಯಲ್ಲಿ ಜನಿಸಿದರು. ಮೈಲಾರಪಟ್ಟಣದಲ್ಲಿ ಹತ್ತನೇ ತರಗತಿವರೆಗೆ ವ್ಯಾಸಂಗ. ಬೆಂಗಳೂರು ವಿಶ್ವವಿದ್ಯಾಲಯದ ಪದವೀಧರೆ, ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದವರು. ಸದ್ಯ ಬೆಂಗಳೂರಿನಲ್ಲಿ ನೆಲೆನಿಂತಿರುವ ಮಂಗಳ ಅವರ ಚೊಚ್ಚಲ ಕೃತಿ ಕೃಷ್ಣಮುದ್ರಿಕೆ . ಹೊಸ ಬಗೆಯ ಕಥಾಹಂದರ ಮತ್ತು ನಿರೂಪಣಾಶೈಲಿಯುಳ್ಳ ವಿಶಿಷ್ಟ ಕಾದಂಬರಿ. ಮೊದಲ ಸಾಹಿತ್ಯ ಕೃತಿಗೆ ಶ್ರೀಮತಿ ಭಾರತಿರಾಜರಾಮಧ್ಯಸ್ಥ ದತ್ತಿ ಪ್ರಶಸ್ತಿ ಹಾಗೂ ವೀಚಿ ಉದಯೋನ್ಮಕ ಸಾಹಿತ್ಯ ಪ್ರಶಸ್ತಿಯ ಹಿರಿಮೆ. ಇದೇ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನ ಸಂದಿದೆ. 

ಮಂಗಳ ಸಿ.

Awards