About the Author

ಲೇಖಕ ಮನು ಪತ್ತಾರ ಅವರು ವಿಜಯಪುರ ಜಿಲ್ಲೆ, ತಾಳಿಕೋಟೆ ತಾಲೂಕಿನ ಕಲಕೇರಿಯವರು. ಎಂ.ಎ., ಬಿ.ಇಡಿ ಪದವೀಧರರು. ಬಸವನ ಬಾಗೇವಾಡಿಯಲ್ಲಿ ಸಮಾಜಕಲ್ಯಾಣ ಇಲಾಖೆಯ ನಿಲಯ ಮೇಲ್ವಿಚಾರಕರಾಗಿದ್ದಾರೆ. ಭಕ್ತಿ ಪ್ರಭೆ, ಹೆದ್ದೂರ ನಾಡಿ ಶಿವಯೋಗಿ, ನಿರಾಳ, ಕಥಾ ಕಾಲಕ್ಷೇಪ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಹಲವು ಸ್ಮರಣ ಹಾಗೂ ಅಭಿನಂದನ ಗ್ರಂಥಗಳಲ್ಲಿ ಅವರ ಲೇಖನಗಳು ಪ್ರಕಟಗೊಂಡಿವೆ. ನಾಡಿನ ಹಲವು ಸಾಹಿತ್ಯಿಕ ಕಮ್ಮಟ ಹಾಗೂ ಸಮ್ಮೇಳನಗಳಲ್ಲಿ ಭಾಗವಹಿಸಿ ಉಪನ್ಯಾಸಗಳನ್ನು ನೀಡಿದ್ದು, ತತ್ವಪದ ಸಾಹಿತ್ಯ ಹಾಗೂ ವಿಮರ್ಶಾ ಕ್ಷೇತ್ರದತ್ತಲೂ ಒಲವು ಹೊಂದಿದ್ದಾರೆ. ಹಲವು ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದು, ಇವರಿಗೆ ಹಲವು ಗೌರವ ಪ್ರಶಸ್ತಿಗಳು ಲಭಿಸಿವೆ.

ಮನು ಪತ್ತಾರ