About the Author

ಹಿರಿಯ ಪತ್ರಕರ್ತ ಮತ್ತಿಹಳ್ಳಿ ನಾಗರಾಜ್ ರಾವ್  ಅವರು ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯಲ್ಲಿ ವೃತ್ತಿ ಆರಂಭಿಸಿದ್ದರು. ಮತ್ತಿಹಳ್ಳಿ ನಾಗರಾಜ್‌ರಾವ್ ಅವರು, 38 ವರ್ಷ ಕಾಲ ಸೇವೆ ಸಲ್ಲಿಸಿ ಹುಬ್ಬಳ್ಳಿ ಆವೃತ್ತಿಯ ಸಂಪಾದಕರಾಗಿದ್ದರು. ಸಿಂಗಾಪುರ, ಯುನೈಟೆಡ್ ಕಿಂಗ್‌ಡಂ ಸೇರಿ 12 ದೇಶಗಳ ಅಧ್ಯಯನ ಪ್ರವಾಸ ಕೈಗೊಂಡು ಇರಾನ್ - ಇರಾಕ್‌ನಲ್ಲಿಯ ಹನಿ ನೀರಾವರಿ ಯೋಜನೆಯ ಯಶಸ್ವಿ ಕುರಿತು ಪುಸ್ತಕ ಪ್ರಕಟಿಸಿದ್ದರು. ಇವರ ಪ್ರವಾಸಿ ಅನುಭವಗಳ 'ಏಷಿಯಾದ ಸುತ', 'ನಾರಿ ನಿನಗೆ ನಮೋ ನಮಃ', 'ಭೂ ಸ್ವರ್ಗ ಸ್ವಿಟ್ಜರ್‌ಲ್ಯಾಂಡ್' ಎಂಬ 4 ಪ್ರವಾಸಿ ಕಥನಗಳ ಕೃತಿಗಳು ಪ್ರಕಟವಾಗಿವೆ. ಅವರಿಗೆ ಪಿ. ರಾಮಯ್ಯ ಪ್ರಶಸ್ತಿ ಮತ್ತು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಂದಿವೆ.

 

ಮತ್ತಿಹಳ್ಳಿ ನಾಗರಾಜರಾವ್