About the Author

ಮೇದರದೊಡ್ಡಿ ಹನುಮಂತ ಅವರು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಮೇದರಗೊಡ್ಡಿ ಗ್ರಾಮದವರು. ಪದವಿಯವರಗೆ ಓದಿರುವ ಅವರು ಕಾವ್ಯವನ್ನೆ ಆರಾಧಿಸುತ್ತಾ, ತನ್ನ ಸುತ್ತಣ ಸಮಾಜವನ್ನು ಕಾವ್ಯಪ್ರಪಂಚನ್ನಾಗಿ ಮಾಡಿಕೊಂಡು ಕನ್ನಡ ಕಾವ್ಯಲೋಕದಲ್ಲಿ ವಿಹರಿಸುತ್ತಿದ್ದಾರೆ. ‘ಸಾಂಬಾರದೊಳಗಣ ಸೌಟು’  ಕವನಸಂಕಲನ ಹಾಗೂ ‘ಜಂಗಮ ವಚನಾಮೃತ’, ‘ಫಕೀರನ ಪ್ರೇಮಗೀತೆಗಳು’ ಎಂಬ ಪ್ರೇಮಗೀತೆಗಳ ಕವನಸಂಕಲನವನ್ನು ಹೊರತಂದಿದ್ದಾರೆ. ರಾಜ್ಯೋತ್ಸವ ಮತ್ತು ಕಾವ್ಯಶ್ರೀ ಪುರಸ್ಕಾರವು ಇವರಿಗೆ ಸಂದಿವೆ.

ಮೇದರದೊಡ್ಡಿ ಹನುಮಂತ