About the Author

ಮುರ್ತುಜಾಬೇಗಂ ಕೊಡಗಲಿ ಅವರು ಇಳಕಲ್ಲು ಮೂಲದವರು. ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ಹಿರೇಬಾದವಾಡಗಿಯ ಸರಕಾರಿ ಪ್ರೌಢಶಾಲೆಯಲ್ಲಿ ಆಂಗ್ಲಭಾಷಾ ಸಹಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಪ್ರಕಟಿತ ಪುಸ್ತಕಗಳು: ಮೊನ್ನೆ ಬಂದ ಮಳೆಗೆ, ಭಾವಬದುಕು, ರಾಬಿಯಾ-ಬಿರುಗಾಳಿಯ ಹಾಡು

ಪ್ರಶಸ್ತಿಗಳು: ದ ರಾ ಬೇಂದ್ರೆ ಗ್ರಂಥ ಬಹುಮಾನ, ಶಿವಮೊಗ್ಗ ಕನ್ನಡ ಸಂಘದಿಂದ ಪಿ ಲಂಕೇಶ್ ಪ್ರಶಸ್ತಿ, ಜಗಜ್ಯೋತಿ ಕಲಾವ್ರಂದ ಮುಂಬೈನಿಂದ ರಾಷ್ಟ್ರಮಟ್ಟದ ಮಹಿಳೆಯರಿಗೆ ಏರ್ಪಡಿಸಲಾದ ಸ್ಪರ್ಧೆಯಲ್ಲಿ ಪಿ ಸುಶೀಲಾ ಸ್ಮರಣಾರ್ಥ ಪ್ರಶಸ್ತಿ, ಸಂಚಯ ಕಾವ್ಯ ಪ್ರಶಸ್ತಿ, ಸಂಕ್ರಮಣ ಕಾವ್ಯ ಮತ್ತು ಚುಟುಕು ಪ್ರಶಸ್ತಿ, ಇಳಕಲ್ಲ ಶ್ರೀಮಠದಿಂದ ಬಸವಭೂಷಣ ಪ್ರಶಸ್ತಿ, ಜಿಲ್ಲೆಯ ಕ್ರಿಯಾಶೀಲ ಲೇಖಕಿ ಪ್ರಶಸ್ತಿ, ಅಡ್ವೈಜರ್ ಪತ್ರಿಕೆಯಿಂದ ಕಾವ್ಯಪ್ರಶಸ್ತಿ, ವಿಕ್ರಂ ಪೈಲ್ ಪ್ರತಿಷ್ಠಾನ ಬದಾಮಿ ಇವರಿಂದ ಮಹಾಯೋಗಿ ವೇಮನ ಪ್ರಶಸ್ತಿ, ಕನ್ನಡ ಸಂಘ ಕೈಗಾ ಇವರಿಂದ ಚುಟುಕುಸ್ಪರ್ಧೆಯಲ್ಲಿ ಪ್ರೋತ್ಸಾಹಕರ ಪ್ರಶಸ್ತಿ ಇವರಿಗೆ ಲಭ್ಯವಾಗಿದೆ.

ಮುರ್ತುಜಾಬೇಗಂ ಕೊಡಗಲಿ