About the Author

ಕರ್ನಾಟಕ ರಾಜ್ಯ ಅಬಕಾರಿ ಇಲಾಖೆಯ ವ್ಯವಸ್ಥಾಪಕಿಯಾಗಿ ಸೇವೆ ಸಲ್ಲಿಸುತ್ತಿರುವ ಮೈತ್ರೇಯಿ (ಎಂ.ಶಿವಮ್ಮ) ಅವರು ಜನಿಸಿದ್ದು 18-02-1955 ಬೆಂಗಳೂರಿನಲ್ಲಿ. ತಂದೆ ಕೆ. ಮುನಿಸ್ವಾಮಿ ತಾಯಿ ಸಿದ್ದಗಂಗಮ್ಮ.

ಇತಿಹಾಸ ವಿಷಯದಲ್ಲಿ ಎಂ.ಎ ಪದವೀಧರೆಯಾಗಿ, ಕನ್ನಡದಲ್ಲೂ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಇವರ ಈ ಭುವಿ ಈ ಬಾಳು , ರಾಗ ಎಂಬ ಇವರ ಎರಡು ಕಾದಂಬರಿಗಳು, ಅಭಿಸಾರಿಕಾ ಮತ್ತು ಇತರ ಕತೆಗಳು, ಜೀವನ ಚರಿತ್ರೆ, ಕಾಕೋಳು ಸರೋಜಮ್ಮ , ಅಶ್ವಿನಿ ಎಂಬ ಕೃತಿಗಳು ಈಗಾಗಲೇ ಕನ್ನಡ ಸಾಹಿತ್ಯ ಲೋಕಕ್ಕೆ ಸೇರ್ಪಡೆಗೊಂಡಿದೆ.

ಮೈತ್ರೇಯಿ (ಎಂ.ಶಿವಮ್ಮ)

(18 Feb 1955)