About the Author

ನಾಗೊಂಡಹಳ್ಳಿ ಸುನಿಲ್ ಅವರು ಮಾಲೂರು ತಾಲ್ಲೂಕು, ಕೋಲಾರ ಜಿಲ್ಲೆಯ ನಾಗೊಂಡಹಳ್ಳಿ ಗ್ರಾಮದಲ್ಲಿ ಚನ್ನಪ್ಪ ಮತ್ತು ಶಾಂತಮ್ಮ ಅವರ ದಂಪತಿಗಳ ಮಗನಾಗಿ ಕೃಷಿಕ ಕುಟುಂಬದಲ್ಲಿ 30/07/1992 ರಂದು ಜನಿಸಿದರು. ಎಂ.ಎ, ಡಿ.ಪಿಜಿ ಬಿ.ಇಡಿ, ಪದವೀಧರರಾದ ಇವರು ಪ್ರಸ್ತುತ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಒಡಲೊಳಗಿನ ಕಡಲು, ಕ್ರಷ್ ಕವಿತೆಗಳು ಎಂಬ ಎರಡು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಮಾಲೂರು, ಕೋಲಾರ, ಬಂಗಾರಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳು ಮತ್ತು ರಾಜ್ಯಾದ್ಯಂತ ಅನೇಕ ಕವಿಗೋಷ್ಠಿಗಳು ಹಾಗೂ ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಭಾಗವಹಿಸಿರುತ್ತಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಚಕೋರ ಕೋಲಾರ ಬಳಗದಲ್ಲಿ ಆರಿದ ಹಣತೆ ಎಂಬ ಭಾವಗೀತೆ ಧ್ವನಿಸುರಳಿಯಾಗಿದೆ. ಕಾಡುವ ಕಿ.ರಂ ಹೊಸ ಕಾವ್ಯ, ಹೂ ಬುಟ್ಟಿ, ಕೃತಿಗಳಲ್ಲಿ ಇವರ ಕವಿತೆಗಳು ಮತ್ತು ಸಾಹಿತ್ಯದ ಬಹುತ್ವದ ನೆಲೆಗಳು, ಸಾಹಿತ್ಯ ಅನುಸಂಧಾನ ಬ್ಲಾಗ್, ಸಾಹಿತ್ಯ ಸುರಭಿ, ಮುಂತಾದವುಗಳಲ್ಲಿ ಲೇಖನಗಳು ಪ್ರಕಟಗೊಂಡಿರುತ್ತವೆ.

ನಾಗೊಂಡಹಳ್ಳಿ ಸುನಿಲ್

(30 Jul 1992)