About the Author

ರಂಗಕರ್ಮಿ, ಲೇಖಕ ನಂದಕುಮಾರ ಜಿ. ಕೆ ಅವರು ಮೂಲತಃ ವಿಜಯ ನಗರ  ಜಿಲ್ಲೆಯ ಹಡಗಲಿಯವರು. 1992 ಸೆಪ್ಟೆಂಬರ್ 30 ರಂದು ಜನನ. ವೃತ್ತಿಯಲ್ಲಿ ಕಲಾವಿದ. ಉತ್ತಮ ಸಂಘಟಕರು ಆಗಿದ್ದಾರೆ. ಕಾಲೇಜು ದಿನಗಳಲ್ಲಿ ಹೂವಿನ ಹಡಗಲಿಯ ಹೆಸರಾಂತ ರಂಗಸಂಸ್ಥೆಯಾದ ರಂಗಭಾರತಿಯಲ್ಲಿ ನಟರಾಗಿ ಅಭಿನಯಿಸಿ, 2017ರ ಸಾಲಿನಲ್ಲಿ ನೀನಾಸಂ ರಂಗಶಿಕ್ಷಣಕ್ಕೆ ಆಯ್ಕೆಯಾಗಿ ಪದವಿ ಪಡೆದುಕೊಂಡು, ಎರಡು ವರ್ಷ ನೀನಾಸಂ ತಿರುಗಾಟದಲ್ಲಿ ನಟಿಸಿ, ನಂತರ ರಂಗಭೂಮಿಯ ಉನ್ನತ ಅಭ್ಯಾಸಕ್ಕಾಗಿ ಡ್ರಾಮಾ ಸ್ಕೂಲ್ ಮುಂಬೈನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಅಧ್ಯಯನ ಮಾಡಿದ್ದಾರೆ. ಮೈಸೂರು ರಂಗಾಯಣ ಪ್ರಸ್ತುತ ಪಡಿಸಿದ ‘ಪರ್ವ’ ಮಹಾರಂಗಪ್ರಯೋಗದಲ್ಲಿ ನಟಿಸಿದ್ದು, ಪ್ರಸ್ತುತ ರಂಗಭೂಮಿಯಲ್ಲಿ ನಟ, ನಿರ್ದೇಶಕ, ಕತೆಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ

ಕೃತಿಗಳು ; ಜಾಲಿ ಮುಳ್ಳು ಮತ್ತ ಇತರ ಕತಿಗುಳು, ಬಿಳೆ ದಾಸ್ವಳ

ನಂದಕುಮಾರ ಜಿ ಕೆ