About the Author

ನಂದಳಿಕೆ ಬಾಲಚಂದ್ರರಾವ್ ಅವರು ಉಡುಪಿ ಜಿಲ್ಲೆಯ ನಂದಳಿಕೆಯವರು. ಕರ್ನಾಟಕ ಬ್ಯಾಂಕ್ ಮಂಗಳೂರು ಪ್ರಾದೇಶಿಕ ಕಚೇರಿಯ ಅಧಿಕಾರಿಗಳು. ಮುದ್ದಣ ಸ್ಮಾರಕ ಮಿತ್ರ ಮಂಡಳಿ ಸ್ಥಾಪಕ ಗೌರವಾಧ್ಯಕ್ಷರು. ಮುದ್ದಣ ಸ್ಮಾರಕ ಭವನ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದವರು. ಮುದ್ದಣ ಪುರಸ್ಕಾರ ವಿದ್ವತ್ ಸಂಮಾನ ಪರಂಪರೆಯ ಸಂಜೋಜಕರು.

ಕವಿ ಮುದ್ದಣ ಸ್ಮಾರಕ ರಚನೆಗಾಗಿ ಡಾ. ಶಿವರಾಮ ಕಾರಂತ ಅವರಿಂದ ಸಂಮಾನ, ಉದಯವಾಣಿ ವಿಂಶತಿ ಪ್ರಶಸ್ತಿ, ಸಂದೇಶ ರಾಜ್ಯ ಪ್ರಶಸ್ತಿ, ದಾವಣಗೆರೆಯ ಪಂಪ ಪ್ರತಿಷ್ಠಾನದಿಂದ ಸಾಂಸ್ಕೃತಿಕ ಶ್ರೀ ಪ್ರಶಸ್ತಿ, ಮುದ್ದಣ-125 ಸಂಸ್ಮರಣೆ ಯಲ್ಲಿ ಕುಶಿ ಅವರಿಂದ ಸಂಮಾನ ಹೀಗೆ ಹಲವು ಗೌರವಗಳಿಗೆ ಪಾತ್ರರಾಗಿದ್ದಾರೆ.

 

ನಂದಳಿಕೆ ಬಾಲಚಂದ್ರ ರಾವ್