About the Author

ನೆಂಪೆ ದೇವರಾಜ್ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ತುಮಕೂರಿನ ಶ್ರೀ ಸಿದ್ದಾರ್ಥ ಪದವಿ ಕಾಲೇಜು ಮತ್ತು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿರುತ್ತಾರೆ. ಮಲೆನಾಡಿನಾದ್ಯಂತ ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹವನ್ನು ಚಳವಳಿಯೋಪಾದಿಯಲ್ಲಿ ವಿಸ್ತರಿಸಬೇಕೆಂಬ ಅಭಿಲಾಷೆಯಿಂದ ಈವರೆಗೂ ನೂರಾರು ಮಂತ್ರ ಮಾಂಗಲ್ಯ ವಿವಾಹ ನಡೆಸಿಕೊಟ್ಟಿರುತ್ತಾರೆ.

ಕೃತಿಗಳು : ಆದ್ರೆ ಮಳೇಲಿ ಆದವ್ನೇ ಗಂಡ, ನವಿಲು ಕಲ್ಲು( ಕುವೆಂಪು ಅವರ ಶತಮಾನೋತ್ಸವದ ನೆನಪಿಗೆ ಹೊರ ತಂದ ಕೃತಿ), ಪ್ರಾಮಾಣಿಕತೆಯ ಪ್ರವಾದಿ ಕಡಿದಾಳು ಮಂಜಪ್ಪ.

ನೆಂಪೆ ದೇವರಾಜ್