ಆದ್ರೆ ಮಳೇಲಿ ಆದವ್ನೆ ಗಂಡ

Author : ನೆಂಪೆ ದೇವರಾಜ್

Pages 130

₹ 150.00




Year of Publication: 2017
Published by: ಮಾತು ಕತೆ ಪ್ರಕಾಶನ

Synopsys

‘ಆದ್ರೆ ಮಳೇಲಿ ಆದವ್ನೆ ಗಂಡ’ ನೆಂಪೆ ದೇವರಾಜ್ ಅವರ ಅಂಕಣಗಳ ಸಂಕಲನವಾಗಿದೆ. ನೆಂಪೆಯವರು ರೈತ ಸಂಗಾತಿ ಪತ್ರಿಕೆಯ ಅಂಕಣಕಾರರಾಗಿ ಬರೆಯುತ್ತಿದ್ದ ಲೇಖನಗಳನ್ನೇ ಇಲ್ಲಿ ಸಂಗ್ರಹಿಸಿ ತಮ್ಮ ಗೆಳೆಯರ ಒತ್ತಾಯದ ಮೇರೆಗೆ ಇಂತಹ ಒಂದು ಅದ್ಭುತ ಅಪರೂಪದ ಕೃತಿಯನ್ನು ನಮ್ಮ ಮುಂದೆ ಇರಿಸಿದ್ದಾರೆ. ಈ ಕೃತಿಯಲ್ಲಿ ನದಿ, ಅಣೆಕಟ್ಟು, ಮಳೆ, ನೆರೆ, ಸೇತುವೆ, ರೈತ ಹೋರಾಟ, ಎಪ್ಪತ್ತು ಎಂಭತ್ತರ ದಶಕದ ರಾಜಕೀಯ, ಮೀನು, ಏಡಿಗಳಂತಹ ಮಲೆನಾಡಿನ ಮೂಸೆಯಲ್ಲಿನ ಮಿಳಿತವಾದ ಅನುಭವಗಳ ವಿಸ್ಮಯಗಳ ಅಸ್ಮಿತೆಯನ್ನು ಅನಾವರಣಗೊಳಿಸಿದ್ದಾರೆ. ಇಲ್ಲಿನ ಈ ಕೃತಿಯಲ್ಲಿ ಮಲೆನಾಡಿನ ಮಳೆಯ ವಿಶೇಷತೆಗಳಿದೆ, ನೆರೆ, ಪ್ರವಾಹ, ಅಣೆಕಟ್ಟುಗಳಿಂದ ಜೀವನ ಕಳೆದುಕೊಂಡ ಮತ್ತು ರೈತ ಹೋರಾಟದ ಜನರ ನೋವಿನ ಸೆಳೆತವಿದೆ. ವಿವಿಧ ಬಗೆಯ ಮತ್ಸ್ಯಲೋಕದ ಪರಿಚಯವಿದೆ. ಮಲೆನಾಡಿನ ಕೃಷಿ ಬದುಕು ಹಾದು ಹೋಗುತ್ತಿರುವ ಪರಿವರ್ತನೆಯ ಕಥನಗಳಿವೆ. ಆಧುನಿಕತೆಯ ಧಾವಂತದಿಂದಾಗುವ ಅನಾಹುತಗಳು, ಸಂಸ್ಕೃತಿ ಪಾರಂಪರಿಗಳ ಮೇಲೆ ಅವುಗಳ ದುಷ್ಪರಿಣಾಮಗಳ ಚಿತ್ರಣಗಳಿವೆ. ಜನ ಜೀವನದೊಂದಿಗೆ ಹಾಸುಹೊಕ್ಕಾಗಿರುವ ಅಧಿಕಾರಶಾಹಿ ಮತ್ತು ದುಷ್ಟರಾಜಕಾರಣದ ಭ್ರಷ್ಟತೆಯ ಕಥನಗಳಿವೆ.

About the Author

ನೆಂಪೆ ದೇವರಾಜ್

ನೆಂಪೆ ದೇವರಾಜ್ ಮೂಲತಃ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಮತ್ತು ಸಮೂಹಸಂಪರ್ಕ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ತುಮಕೂರಿನ ಶ್ರೀ ಸಿದ್ದಾರ್ಥ ಪದವಿ ಕಾಲೇಜು ಮತ್ತು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿರುತ್ತಾರೆ. ಮಲೆನಾಡಿನಾದ್ಯಂತ ಕುವೆಂಪು ಅವರ ಮಂತ್ರ ಮಾಂಗಲ್ಯ ವಿವಾಹವನ್ನು ಚಳವಳಿಯೋಪಾದಿಯಲ್ಲಿ ವಿಸ್ತರಿಸಬೇಕೆಂಬ ಅಭಿಲಾಷೆಯಿಂದ ಈವರೆಗೂ ನೂರಾರು ಮಂತ್ರ ಮಾಂಗಲ್ಯ ವಿವಾಹ ನಡೆಸಿಕೊಟ್ಟಿರುತ್ತಾರೆ. ಕೃತಿಗಳು : ಆದ್ರೆ ಮಳೇಲಿ ಆದವ್ನೇ ಗಂಡ, ನವಿಲು ಕಲ್ಲು( ಕುವೆಂಪು ಅವರ ಶತಮಾನೋತ್ಸವದ ನೆನಪಿಗೆ ಹೊರ ತಂದ ಕೃತಿ), ಪ್ರಾಮಾಣಿಕತೆಯ ಪ್ರವಾದಿ ಕಡಿದಾಳು ಮಂಜಪ್ಪ. ...

READ MORE

Related Books