About the Author

ಲೇಖಕಿ ನಿಕೇತನ 1970 ಮಾರ್ಚ್ 17 ರಂದು ಜನಿಸಿದರು. ’ಸ್ತ್ರೀದೃಷ್ಟಿ, ಮಂದಾರ ಕೇಶವಭಟ್ಟ, ಮಂದಾರ ರಾಮಾಯಣ ಪರಿಚಯ, ಮನ್ಸ ಜನಾಂಗದಲ್ಲಿ ಮಹಿಳೆ’ ಅವರ ಪ್ರಕಟಿತ ಕೃತಿಗಳು. ತುಳುವಿನಲ್ಲಿಯೂ ಅವರ 3 ಪುಸ್ತಕಗಳು ಪ್ರಕಟವಾಗಿವೆ. ’ಹೆಜ್ಜೆ ಕಲಶ’ ಎಂಬ ಸಂಪಾದಿತ ಕೃತಿ. ತುಳು ಮಹಾಕಾವ್ಯ ಮಂದಾರ ರಾಮಾಯಣ 'ಸ್ವರೂಪ ಮತ್ತು ಅನನ್ಯತೆ' ಪಿಎಚ್.ಡಿ. ಮಹಾಪ್ರಬಂಧವನ್ನು ಮಂಡಿಸಿದ್ಧಾರೆ. ಕನ್ನಡ ಸಾಹಿತ್ಯ ಪರಿಷತ್ತಿನಿಂದ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ,  ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಎಸ್.ಪುಟ್ಟಣ್ಣ ಸ್ಮಾರಕ ದತ್ತಿನಿಧಿ ಬಹುಮಾನ ದೊರೆತಿದೆ. 

 

ನಿಕೇತನ

(17 Apr 1970)