About the Author

.ಲೇಖಕಿ ನಿರ್ಮಲಾ ಸುರತ್ಕಲ್ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನಿಡ್ಪುರ ಗ್ರಾಮದವರು. ಎಸ್.ಎಸ್.ಎಲ್.ಸಿ. ವರೆಗೆ ವಿದ್ಯಾಭ್ಯಾಸ. ವಸತಿ ನಿಯಲದ ಪಾಲಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. 

ನಾನು ಪ್ರೀತಿಸುತ್ತೇನೆ (ಕವನ ಸಂಕಲನ), ತಿರುಚಬೇಡಿ ಮನಸುಗಳ ದೊಡ್ಡವರಿಗಾಗಿ, ಪಾತರಗಿತ್ತಿ ಪಕ್ಕಾ, ಅ..ಆ..ಇ..ಈ..ಉ..ಊ.., ಪುಟ್ಟಪುಟ್ಟಿ ಗುಟ್ಟಾಗಿ, ಸಕ್ರೆ ಮೂಟೇ ಯಾರಿಗ್ಬೇಕೂ...? ಚೀಂ ಚೀಂ ಚಿಕ್ಕ ಗುಬ್ಬಿ (ಮಕ್ಕಳ ಕವನ ಸಂಕಲನ) ಶ್ರಮಯೇವ... ಜಯತೆ (ಕಾದಂಬರಿ) . ಇವರಿಗೆ ಬಾಲವಿಕಾಸ ಅಕಾಡೆಮಿಯಿಂದ ಎರಡು ಬಾರಿ ಮಕ್ಕಳ ಚಂದಿರ ಪ್ರಶಸ್ತಿ, ಪುತ್ತೂರಿನ ಬೋಳಂತಕೋಡಿ ಕನ್ನಡ ಪ್ರಶಸ್ತಿ, ಡಿಸೋಜಾ-ಎಚ್ ಎಸ್.ವಿ ಪುಟಾಣಿ ಸಾಹಿತ್ಯ ಪುರಸ್ಕಾರ ಸಾಹಿತ್ಯ ಪುರಸ್ಕಾರ ದೊರೆತಿದೆ. 

ಮಕ್ಕಳ ಸಾಹಿತ್ಯ ಸೇವೆ ಪರಿಗಣಿಸಿ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಮಕ್ಕಳ ಸಾಹಿತ್ಯ ವಿಭಾಗದಲ್ಲಿ 2016ನೇ ಸಾಲಿನ ಅತ್ಯುತ್ತಮ ಕೃತಿ ಎಂದು ಪುಸ್ತಕ ಬಹುಮಾನ ನೀಡಿದೆ.

ನಿರ್ಮಲಾ ಸುರತ್ಕಲ್