About the Author

ಪ್ರಭು ಚನ್ನಬಸವ ಸ್ವಾಮೀಜಿ ಅವರು ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠದ ಶ್ರೀಗಳಾಗಿದ್ದಾರೆ. ಸಮಾಜಸೇವಾ ದೀಕ್ಷೆಯೊಂದಿಗೆ ಸಾಹಿತ್ಯ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕವಿ, ಆಧುನಿಕ ವಚನಕಾರ, ಖ್ಯಾತ ಪ್ರವಚನ ವಾಗ್ಮಿ, ನೂರಾರು ಸಾಂಸ್ಕೃತಿಕ ಸಮಾರಂಭಗಳ ಹರಿಕಾರ, ಸಂಘಟನಾ ಚತುರಾಗಿರುವ ಅವರು ‘ಅಥಣೀಶ’ ಎಂಬ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸುತ್ತಾರೆ. ಅವರು ರಚಿಸಿರುವ 200ಕ್ಕೂ ಅಧಿಕ ಮಹಾತ್ಮರ ಚರಿತೆಯನ್ನು ಕಟ್ಟಿಕೊಟ್ಟಿರುವ ‘ಮಹಾತ್ಮರ ಚರಿತಾಮೃತ’ ಕೃತಿ ಪ್ರಕಟವಾಗಿದೆ.

ಪ್ರಭು ಚನ್ನಬಸವ ಸ್ವಾಮೀಜಿ