ಮಹಾತ್ಮರ ಚರಿತಾಮೃತ

Author : ಪ್ರಭು ಚನ್ನಬಸವ ಸ್ವಾಮೀಜಿ

Pages 1048

₹ 2000.00




Year of Publication: 2021
Published by: ಸ್ವ್ಯಾನ್ ಪ್ರಿಂಟರ್‍ಸ್
Address: 134/9/5, ಎರಡನೇ ಮುಖ್ಯರಸ್ತೆ, 10 ನೇ ಕ್ರಾಸ್, ಎರಡನೇ ಮಾರ್ಗ, ಚಾಮರಾಜಪೇಟೆ, ಬೆಂಗಳೂರು- ಕರ್ನಾಟಕ.
Phone: 9901150946

Synopsys

‘ಪ್ರಭುಚನ್ನಬಸವ ಸ್ವಾಮೀಜಿ’ ವಿರಚಿತ 216 ವಿಶ್ವವಿಭೂತಿಗಳ ಜೀವನ ಕಥನ -ಮಹಾತ್ಮರ ಚರಿತಾಮೃತ. ಜೀವದಯೆ, ಮಾನವೀಯ ಅನುಕಂಪ, ಸಮಭಾವ, ಸಮದರ್ಶನಗಳು ಮಹಾತ್ಮರ ಲಕ್ಷಣಗಳು. ಅವರು ಸರ್ವರನ್ನೂ ಸಮಭಾವದಿಂದ ಕಂಡ ಸಂದರ್ಶಿಗಳು; ಹೃದಯ ವೈಶಾಲ್ಯತೆಗೆ ಹೆಸರಾದವರು; ಎಲ್ಲ ಜೀವಿಗಳಲ್ಲಿ ವಿಶ್ವಾತ್ಮ ಶಕ್ತಿಯನ್ನು ಕಂಡು ವಿಶ್ವಾತ್ಮಕತೆಯನ್ನು ಸಾರಿದವರು. ಇಂತಹ ಮಹಾತ್ಮರ ಭವ್ಯ ಮತ್ತು ದಿವ್ಯ ಚರಿತೆಯ ರಸಾನುಭೂತಿಯನ್ನು ಉಂಟು ಮಾಡುವ ಕೃತಿಯೇ ‘ಮಹಾತ್ಮರ ಚರಿತಾಮೃತ’. ಈ ಕೃತಿಯಲ್ಲಿ ಮಹಾತ್ಮರ ಚರಿತ್ರೆಗಳನ್ನು ಅಂಕಲಗಿ ಅಡಿವೆಪ್ಪನವರಿಂದ ಹೊಸಹಳ್ಳಿಯ ಬೂದೀಶ್ವರರವರೆಗೆ ಓದುಗರ ಅನುಕೂಲಕ್ಕಾಗಿ ಅಕಾರಾಧಿಯಲ್ಲಿ ಹೊಂದಿಸಲಾಗಿದೆ. ಅನುಕ್ರಮಣಿಕೆಯ ಆದ್ಯಂತದಲ್ಲಿರುವ ಈ ಮಹಾತ್ಮರೀರ್ವರೂ ತಮ್ಮ ಸಾಧನೆಯಿಂದ ಏಳುನೂರಾ ಎಪ್ಪತ್ತು ವರ್ಷ ಬದುಕಿದವರೆಂದು ವಿಶೇಷ ಮತ್ತು ಯೋಗಾಯೋಗಾ, ಉಳಿದಂತೆ ಈ ಕೃತಿಯಲ್ಲಿ ಆದಿಕವಿ ವಾಲ್ಮೀಕಿಯಿಂದ ಆಧುನಿಕ ವಿಶ್ವಪ್ರಸಿದ್ಧ ಕವಿ ರವೀಂದ್ರನಾಥರವರೆಗೆ ಅನೇಕ ಕವಿಗಳು, ಮಹಾವೀರ, ಬುದ್ಧ, ಬಸವನಂತಹ ದಾರ್ಶನಿಕರು; ಶಂಕರ, ರಾಮಾನುಜ, ಮಧ್ವರಂತಹ ಆಚಾರ್ಯರು; ಏಸು, ಮಹಮ್ಮದ ಗುರುನಾನಕರಂತಹ ಧರ್ಮಪತ್ರಕರ್ತರು, ಜ್ಞಾನೇಶ್ವರ, ತುಕಾರಾಮ, ಸೇವಾಲಾಲ, ರಾಮದಾಸರಂತಹ ಸಂತರು; ಕನಕ-ಪುರಂದರರಂತಹ ದಾಸರು; ಅಕ್ಕ, ಅಲ್ಲಮ್ಮ, ಸಿದ್ಧರಾಮದೇವರಂತಹ ಯೋಗ ಸಾಧಕರು; ರಬಿಯಾ, ಅಂಡಾಳ, ಮೀರಾ, ಲಲ್ಲೇಶ್ವರಿಯಿಂದ ಮೊದಲ್ಗೊಂಡು ಆಧುನಿಕ ಕಾಲದ ಸಾಧಕಿಯರು; ನಿಜಗುಣ, ಸರ್ಪಭೂಷಣ, ನಾಗಭೂಷಣ, ಬಾಲಲೀಲಾ ಮಹಾಂತ ಶಿವಯೋಗಿ, ಶಿಶುನಾಳ ಶರೀಫರಂತಹ ತತ್ತ್ವಪದಕಾರರು; ಖ್ವಾಜಾ ಬಂದೇನವಾಜರಂತಹ ಮಹಮ್ಮದೀಯ ಮೌಲ್ವಿಗಳು, ಎಡೆಯೂರು ಸಿದ್ದಲಿಂಗೇಶ್ವರ, ಅಥಣಿಯ ಮುರಘಯೋಗಿ, ಹಾನಗಲ್ಲ ಕುಮಾರ ಸ್ವಾಮಿಗಳಾದಿಯಾಗಿ ಇತ್ತೀಚಿನ ತೋಂಟದ ಸಿದ್ಧಲಿಂಗ ಸ್ವಾಮಿಗಳ ವರೆಗೆ ಅನೇಕ ಸ್ವಾಮಿಗಳು, ಅರವಿಂದ-ರಮಣರಂತಹ ಮಹರ್ಷಿಗಳು; ರಾಮಕೃಷ್ಣ-ವಿವೇಕಾನಂದರಂತಹ ಮಾದರಿ ಗುರು-ಶಿಷ್ಯರು; ರಾಜಾರಾಮ ಮೋಹನರಾಯ, ದಯಾನಂದ ಸರಸ್ವತಿ, ಜ್ಯೋತಿಬಾ ಫುಲೆ, ನಾರಾಯಣ ಗುರುಗಳಂತಹ ಸಮಾಜ ಸುಧಾರಕರು; ಮಹಾತ್ಮಗಾಂಧಿ -ಅಂಬೇಡ್ಕರ ಅವರಂತಹ ದೇಶಭಕ್ತರ ಚರಿತ್ರೆಗಳಿವೆ. ತತ್ತ್ವಜ್ಞಾನಿ ರಾನಡೆ, ಇಸ್ಕಾನದ ಪ್ರಭುಪಾದರು, ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಬಾಬಾ , ಸಾಯಿಬಾಬಾ ಅವರ ಚರಿತ್ರೆಗಳೂ ಇಲ್ಲಿವೆ.

About the Author

ಪ್ರಭು ಚನ್ನಬಸವ ಸ್ವಾಮೀಜಿ

ಪ್ರಭು ಚನ್ನಬಸವ ಸ್ವಾಮೀಜಿ ಅವರು ಬೆಳಗಾವಿ ಜಿಲ್ಲೆಯ ಅಥಣಿಯ ಶ್ರೀ ಮೋಟಗಿ ಮಠದ ಶ್ರೀಗಳಾಗಿದ್ದಾರೆ. ಸಮಾಜಸೇವಾ ದೀಕ್ಷೆಯೊಂದಿಗೆ ಸಾಹಿತ್ಯ ರಚನೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕವಿ, ಆಧುನಿಕ ವಚನಕಾರ, ಖ್ಯಾತ ಪ್ರವಚನ ವಾಗ್ಮಿ, ನೂರಾರು ಸಾಂಸ್ಕೃತಿಕ ಸಮಾರಂಭಗಳ ಹರಿಕಾರ, ಸಂಘಟನಾ ಚತುರಾಗಿರುವ ಅವರು ‘ಅಥಣೀಶ’ ಎಂಬ ಕಾವ್ಯನಾಮದಲ್ಲಿ ಕೃತಿಗಳನ್ನು ರಚಿಸುತ್ತಾರೆ. ಅವರು ರಚಿಸಿರುವ 200ಕ್ಕೂ ಅಧಿಕ ಮಹಾತ್ಮರ ಚರಿತೆಯನ್ನು ಕಟ್ಟಿಕೊಟ್ಟಿರುವ ‘ಮಹಾತ್ಮರ ಚರಿತಾಮೃತ’ ಕೃತಿ ಪ್ರಕಟವಾಗಿದೆ. ...

READ MORE

Related Books