About the Author

ಲೇಖಕ ಡಾ. ಪ್ರಸನ್ನಕುಮಾರ ಐತಾಳ್ ಅವರು ಮೂಲತಃ ಕುಂದಾಪುರ ತಾಲೂಕಿನ ಕೋಟೇಶ್ವರದವರು. ಕಟೀಲಿನ ಶ್ರೀದುರ್ಗಾ ಸಂಸ್ಕೃತ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನಾ ಕೇಂದ್ರದ ಮೂಲಕ ಮಂಗಳೂರು ವಿ.ವಿ.ಯಿಂದ ಸಂಸ್ಕೃತ ಭಾಷೆಯಲ್ಲಿ ಎಂ.ಎ. ಪದವಿ ಹಾಗೂ ಡಾಕ್ಟರೇಟ್ ಪಡೆದವರು. ಮೈಸೂರು ಮುಕ್ತ ವಿ.ವಿ.ಯಿಂದ ಕನ್ನಡದಲ್ಲಿ ಎಂ.ಎ. ಪದವೀಧರರು. ಧಾರವಾಡದ ಕರ್ನಾಟಕ ವಿ.ವಿ.ಯಿಂದ ಬಿ.ಎಡ್, ಹಾಗೂ ತಿರುಪತಿ ವೆಂಕಟೇಶ್ವರ ವಿ.ವಿಯಿಂದ ಎಂ.ಫಿಲ್ ಪದವಿ ಪಡೆದಿದ್ದಾರೆ. ನಾಟಕ, ಅಭಿನಯ, ನಿರ್ದೇಶನ, ಯಕ್ಷಗಾನ, ತಾಳಮದ್ದಳೆ, ಗಮಕ ಪ್ರವಚನದಲ್ಲಿ ಆಸಕ್ತರು. ಸದ್ಯ, ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನಲ್ಲಿ ಸಂಸ್ಕೃತ ಭಾಷಾ ಪ್ರಾಧ್ಯಾಪಕರು.

ಕೃತಿಗಳು: ಸಂಸ್ಕೃತ ಮಂಜೂಷಾ, ದಾನ ಪುರುಷಾರ್ಥ

ಪ್ರಸನ್ನಕುಮಾರ ಐತಾಳ್