About the Author

ಸಾಹಿತಿ ಆರ್.ಎಸ್. ಚುಳಕಿ ಅವರ ಪೂರ್ಣ ಹೆಸರು ರಾಘವೇಂದ್ರ ಶಾಮರಾವ ಚುಳಕಿ.. (ಬಿಜಾಪುರದಲ್ಲಿ ಜನನ: 1942 ಸೆಪ್ಟಂಬರ್‌ 20) ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಪಿಎಚ್.ಡಿ ಪಡೆದಿದ್ದು, ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಗಳಲ್ಲಿ ಆಂಗ್ಲ ಉಪನ್ಯಾಸಕರಾಗಿ  2000ದಲ್ಲಿ ನಿವೃತ್ತಿ ಹೊಂದಿದರು.

'ಎರಡು ದುರಂತ ನಾಟಕಗಳು', 'ಆತ್ಮಾರ್ಪಣೆ' (ಕಾದಂಬರಿ) `ಮೆಡೋಸ ಟೇಲರ' (ಜೀವನ ಚರಿತ್ರೆ), 'ಋಣಾನುಬಂಧ' (ಏಕಾಂತ ನಾಟಕ), ‘ಸುಹರಾಬರುಸ್ತುಂ’ (ಆರ್ನಾಲ್ಡರ ಕವಿತೆಯ ಅನುವಾದ), 'ಶ್ರೀ ಸಿದ್ಧಾರೂಢ ಸ್ವಾಮಿಗಳ ಚರಿತ್ರೆ' (ಮರಾಠಿಗೆ ಅನುವಾದ) 'ಶ್ರೀ ಚಂದ್ರಲಾ ಪರಮೇಶ್ವರಿ ಮಹಾತ್ಮೆ(ಕಿರು ಪುಸ್ತಕ) ಅವರ ಪ್ರಕಟಿತ ಕೃತಿಗಳು. 

ಆರ್.ಎಸ್. ಚುಳಕಿ

(20 Sep 1942)