ಮೆಡೋಸ ಟೇಲರನು ಚಿತ್ರಿಸಿದ ಭಾರತ

Author : ಆರ್.ಎಸ್. ಚುಳಕಿ

Pages 162

₹ 100.00




Year of Publication: 2008
Published by: ಕನ್ನಡ ಸಾಹಿತ್ಯ ಪರಿಷತ್ತು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018
Phone: 080- 26612991 / 26623584

Synopsys

ಕ್ರಿ.ಶ 1824ರಲ್ಲಿ ತರುಣನಾಗಿದ್ದಾಗಲೇ ಇಂಗ್ಲೆಂಡಿನಿಂದ ಭಾರತಕ್ಕೆ ಬಂದ ಮೆಡೋಸ ಟೇಲರ್ ಮೂವತ್ತೈದು ವರ್ಷಗಳ ಕಾಲ ಭಾರತದಲ್ಲಿದ್ದವನು. ರಾಜಕೀಯ ಪ್ರತಿನಿಧಿಯಾಗಿ ಸುರಪುರ ಸಂಸ್ಥಾನಕ್ಕೆ ಸೇವೆ ಸಲ್ಲಿಸಿ, ಆಡಳಿತದಲ್ಲಿ ಸುಧಾರಣೆ ಮಾಡಿ ಭಾರತೀಯರೊಡನೆ ಬೆರೆತು ಬಾಳಿ, ಮರಳಿ ಇಂಗ್ಲೆಂಡ್ ಗೆ ಹೋಗಿ, ಅಲ್ಲಿ ಭಾರತದ ಅನಧಿಕೃತ ರಾಯಭಾರಿಯಂತೆ ಕಾರ್ಯ ಮಾಡಿದನು. ಭಾರತದ ಹಿರಿಮೆ-ಗರಿಮೆಗಳನ್ನು, ಧರ್ಮ, ಸಂಸ್ಕೃತಿ, ನಾಗರೀಕತೆ, ಇತಿಹಾಸ, ಕಲೆಗಳನ್ನು ತಿಳಿಸಿಕೊಡಲು ಐತಿಹಾಸಿಕ ಕಾದಂಬರಿಗಳನ್ನು ಬರೆದ.  ಟೀಪೂ ಸುಲ್ತಾನ, ತಾರಾ, ಚಾಂದಬೀಬಿ, ಎಂಬ ಬೃಹತ್ ಕಾದಂಬರಿಗಳಲ್ಲಿ ಸಮಗ್ರ ಕರ್ನಾಟಕದ ಜೀವನವನ್ನು ಚಿತ್ರಿಸಿದ್ದಾನೆ. 

ಟೇಲರನ ಕುರಿತಾದ  ಸಮಗ್ರ ಸಂಶೋಧನೆಯನ್ನು ಡಾ. ಆರ್. ಎಸ್. ಚುಳಕಿ ಅವರು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪಿಎಚ್.ಡಿ ಪದವಿಗಾಗಿ ಸಲ್ಲಿಸಿದ ಮಹಾಪ್ರಬಂಧದ ಸಂಶೋಧನಾ ಮಾಲಿಕೆಯಾಗಿ ಪ್ರಕಟಗೊಳಿಸಲಾಗಿದೆ.  ಇಂತಹ ಜನಪ್ರಿಯ ಆಡಳಿತಗಾರ, ಶ್ರೇಷ್ಠಸಾಹಿತಿ, ಪ್ರಾಮಾಣಿಕ ಇತಿಹಾಸಕಾರನಾದ ಮೆಡೋಸ ಟೇಲರನ ವ್ಯಕ್ತಿತ್ವವನ್ನು ’ಮೆಡೋಸ ಟೇಲರನು ಚಿತ್ರಿಸಿದ ಭಾರತ’ ಗ್ರಂಥದಲ್ಲಿ ಕಾಣಬಹುದು. 

About the Author

ಆರ್.ಎಸ್. ಚುಳಕಿ
(20 September 1942)

ಸಾಹಿತಿ ಆರ್.ಎಸ್. ಚುಳಕಿ ಅವರ ಪೂರ್ಣ ಹೆಸರು ರಾಘವೇಂದ್ರ ಶಾಮರಾವ ಚುಳಕಿ.. (ಬಿಜಾಪುರದಲ್ಲಿ ಜನನ: 1942 ಸೆಪ್ಟಂಬರ್‌ 20) ಕರ್ನಾಟಕ ವಿಶ್ವವಿದ್ಯಾಲಯದಿಂದ ಇಂಗ್ಲಿಷ್‌ನಲ್ಲಿ ಪಿಎಚ್.ಡಿ ಪಡೆದಿದ್ದು, ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಗಳಲ್ಲಿ ಆಂಗ್ಲ ಉಪನ್ಯಾಸಕರಾಗಿ  2000ದಲ್ಲಿ ನಿವೃತ್ತಿ ಹೊಂದಿದರು. 'ಎರಡು ದುರಂತ ನಾಟಕಗಳು', 'ಆತ್ಮಾರ್ಪಣೆ' (ಕಾದಂಬರಿ) `ಮೆಡೋಸ ಟೇಲರ' (ಜೀವನ ಚರಿತ್ರೆ), 'ಋಣಾನುಬಂಧ' (ಏಕಾಂತ ನಾಟಕ), ‘ಸುಹರಾಬರುಸ್ತುಂ’ (ಆರ್ನಾಲ್ಡರ ಕವಿತೆಯ ಅನುವಾದ), 'ಶ್ರೀ ಸಿದ್ಧಾರೂಢ ಸ್ವಾಮಿಗಳ ಚರಿತ್ರೆ' (ಮರಾಠಿಗೆ ಅನುವಾದ) 'ಶ್ರೀ ಚಂದ್ರಲಾ ಪರಮೇಶ್ವರಿ ಮಹಾತ್ಮೆ(ಕಿರು ಪುಸ್ತಕ) ಅವರ ಪ್ರಕಟಿತ ಕೃತಿಗಳು.  ...

READ MORE

Related Books