About the Author

ಪತ್ರಕರ್ತ, ಲೇಖಕ ರಾ. ಚಿಂತನ್ ಅವರು 2005ರಲ್ಲಿ ಬೆಂಗಳೂರಿನಲ್ಲಿ ಪತ್ರಕರ್ತರಾಗಿ ವೃತ್ತಿಜೀವನವನ್ನು ಆರಂಭಿಸಿದರು. ಹಾಯ್ ಬೆಂಗಳೂರ್ ಸಂಪಾದಕರಾದ ರವಿ ಬೆಳಗೆರೆಯವರ ಜೊತೆ ಕೆಲಸ ಕಲಿತು, ಮುಂದೆ ಲಂಕೇಶ್, ತೇಜಸ್ವಿಯವರ ಪ್ರಭಾವಕ್ಕೆ ಒಳಗಾದರು. ಸುವರ್ಣ ನ್ಯೂಸ್, ರಾಜ್ ನ್ಯೂಸ್ ಚಾನೆಲಿನಲ್ಲಿ ಕೆಲವರ್ಷಗಳ ಕಾಲ ಕೆಲಸ ಮಾಡಿ ‘ನಮ್ಮ ಧ್ವನಿ' ಎಂಬ ಸಂಘಟನೆಯಲ್ಲಿ ಗುರುತಿಸಿಕೊಂಡರು. ಇಲ್ಲಿಯವರೆಗೆ ಮೂರು ಪುಸ್ತಕಗಳನ್ನು ರಚಿಸಿದ್ದಾರೆ. ‘ಅಪಶಕುನ', ‘ಮಂಗಳೂರು ಗೋಲಿಬಾರ್,  ‘ಪರಮೇಶಿ ಪೆನ್‍ಡ್ರೈವ್' ಲೇಖಕರು ರಚಿಸಿದ ಕೃತಿಗಳಾಗಿವೆ. ಮಂಗಳೂರು ಗೋಲಿಬಾರ್ ಕೇವಲ ಹದಿನೈದು ದಿನದಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಪ್ರತಿಗಳು ಮಾರಾಟವಾದ ಪುಸ್ತಕ.

ರಾ. ಚಿಂತನ್

(03 Oct 2021)