About the Author

ವೃತ್ತಿಯಿಂದ ವಕೀಲರಾದ ರಾಘವೇಂದ್ರ ಹೆಗಡೆ ಅವರು ಜನಪರವಾಗಿ ಲೇಖನಿ ಮೂಲಕ ಹೋರಾಡುತ್ತಾರೆ. ಮಲೆನಾಡಿನ ಪಶ್ಚಿಮಘಟ್ಟಗಳ ಸೆರಗಲ್ಲಿ ಹುಟ್ಟಿ ಬೆಳೆದು ದೇಶ ವಿದೇಶಗಳಲ್ಲಿ ವ್ಯಾಪಕವಾಗಿ, ಸಂಚರಿಸಿರುವ ಇವರಿಗೆ ‘ಪರಿಸರ ಸಂರಕ್ಷಣೆ, ನೀರಿನ ನಿರ್ವಹಣೆ, ಹಸಿರು ತಂತ್ರಜ್ಞಾನ, ಮರುಬಳಕೆ ಮತ್ತು ಸುಸ್ಥಿರ ಬದುಕು’ ಇತರ ವಿಷಯಗಳು ಇವರಿಗೆ ಆಸಕ್ತಿ. 

ಕಳೆದ ಹತ್ತು ವರ್ಷಗಳಿಂದ ಇವರು ಭಾರತದ ಪ್ರಸಿದ್ದ ಖಾಸಗೀ ವಿದೇಶಿ ಬಂಡವಾಳ ನಿರ್ವಹಣಾ ಸಂಸ್ಥೆ (ಪೈವೇಟ್ ಇಕ್ವಿಟಿ)ಯೊಂದರ ಕಾನೂನು 'ವಿಭಾಗದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಲ್ಲಿದ್ದಾರೆ. 

ಜಲದಾಹದಿಂದ ತತ್ತರಿಸುತ್ತಿರುವ ಜಗತ್ತಿಗೆ ಇಸ್ರೇಲ್‌ನ ಪರಿಹಾರದ ಕುರಿತು ‘ಸೇತ್ ಎಂ. ಸಿಗೆಲ್’ ಅವರು ರಚಿಸಿರುವ ‘ನಾಳೆಗೂ ಇರಲಿ ನೀರು’ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 

 

ರಾಘವೇಂದ್ರ ಹೆಗಡೆ