ನಾಳೆಗೂ ಇರಲಿ ನೀರು

Author : ರಾಘವೇಂದ್ರ ಹೆಗಡೆ

Pages 216

₹ 225.00




Year of Publication: 2018
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 080-26617100/2667755

Synopsys

ಶೇಕಡ 60ಕ್ಕೂ ಹೆಚ್ಚು ಮರುಭೂಮಿಯ ಪ್ರದೇಶವನ್ನು ಹೊಂದಿರುವ, ಅತ್ಯಂತ ಕಡಿಮೆ ಪ್ರಮಾಣದ ಮಳೆ ಬೀಳುತ್ತಿರುವ ಇಸ್ರೇಲ್ ದೇಶವು ಹೇಗೆ ನೀರಿನಲ್ಲಿ ಸ್ವಾವಲಂಬಿಯಾಗಿದೆ ಮತ್ತು  ಬೇರೆ ದೇಶಗಳಿಗೆ ನೀರನ್ನು ರಫ್ತು ಮಾಡುವ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಿಸಿದ್ದಾರೆ. ಎರಡನೇ ಜಾಗತಿಕ ಯುದ್ಧದ ನಂತರ ವಿಶ್ವದ ವೇಗವಾಗಿ ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಇಸ್ರೇಲ್ ಕೂಡ ಒಂದು. 1948 ಅಸ್ತಿತ್ವಕ್ಕೆ ಬಂದ ಇಸ್ರೇಲ್ ದೇಶವು ಜನ ಸಂಖ್ಯೆ ಹತ್ತು ಪಟ್ಟು ಹೆಚ್ಚಾಗಿದೆ. ಹವಾಮಾನದ ವೈಪರೀತ್ಯದಿಂದ ಮಳೆಯ ಪ್ರಮಾಣವು ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ , ಆದರೂ ಇಸ್ರೇಲ್ ದೇಶವು ನೀರನ್ನು ಬೇರೆ ದೇಶಗಳಿಗೆ ರಪ್ತು ಮಾಡುವ ಮೂಲಕ ಹೇಗೆ ಮಾದರಿಯಾಗಿದೆ  ಎಂಬುದರ ಮಾಹಿತಿಯನ್ನು ಲೇಖಕರು ಇಲ್ಲಿ ನೀಡಿದ್ದಾರೆ. 1948 ಅಸ್ತಿತ್ವಕ್ಕೆ ಬಂದ ಇಸ್ರೇಲ್ ದೇಶದಲ್ಲಿ 1955ರಲ್ಲಿಯೇ ನಾಗರಿಕರು ಕೊಳವೆ ಬಾವಿ ಕೊರೆಸುವುದನ್ನು ನಿಷೇಧಿಸಲಾಗಿದೆ. ನದಿ, ಕೆರೆ, ಸರೋವರ, ತೊರೆ ಮತ್ತು ಮಳೆ ನೀರೂ ಸಹ ಸರ್ಕಾರಿ ಸೊತ್ತು ಎಂದು ಘೋಷಿಸಿದ್ದು ಸರ್ಕಾರದ ಅಪ್ಪಣೆ ಇಲ್ಲದೆ ಯಾವುದೇ ಕಾರಣಕ್ಕೂ ಯಾರೂ ನೀರನ್ನು ಉಪಯೋಗಿಸುವ ಹಾಗೆ ಇಲ್ಲ ಎಂಬ ಆಜ್ಷೆ ಇದೆ. ಹೀಗೆ ಪ್ರಮುಖ ವಿಷಯಗಳ ಕುರಿತು ಲೇಖಕರು ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.

About the Author

ರಾಘವೇಂದ್ರ ಹೆಗಡೆ

ವೃತ್ತಿಯಿಂದ ವಕೀಲರಾದ ರಾಘವೇಂದ್ರ ಹೆಗಡೆ ಅವರು ಜನಪರವಾಗಿ ಲೇಖನಿ ಮೂಲಕ ಹೋರಾಡುತ್ತಾರೆ. ಮಲೆನಾಡಿನ ಪಶ್ಚಿಮಘಟ್ಟಗಳ ಸೆರಗಲ್ಲಿ ಹುಟ್ಟಿ ಬೆಳೆದು ದೇಶ ವಿದೇಶಗಳಲ್ಲಿ ವ್ಯಾಪಕವಾಗಿ, ಸಂಚರಿಸಿರುವ ಇವರಿಗೆ ‘ಪರಿಸರ ಸಂರಕ್ಷಣೆ, ನೀರಿನ ನಿರ್ವಹಣೆ, ಹಸಿರು ತಂತ್ರಜ್ಞಾನ, ಮರುಬಳಕೆ ಮತ್ತು ಸುಸ್ಥಿರ ಬದುಕು’ ಇತರ ವಿಷಯಗಳು ಇವರಿಗೆ ಆಸಕ್ತಿ.  ಕಳೆದ ಹತ್ತು ವರ್ಷಗಳಿಂದ ಇವರು ಭಾರತದ ಪ್ರಸಿದ್ದ ಖಾಸಗೀ ವಿದೇಶಿ ಬಂಡವಾಳ ನಿರ್ವಹಣಾ ಸಂಸ್ಥೆ (ಪೈವೇಟ್ ಇಕ್ವಿಟಿ)ಯೊಂದರ ಕಾನೂನು 'ವಿಭಾಗದಲ್ಲಿ ಕಾರ್ಯನಿರ್ವಾಹಕ ನಿರ್ದೇಶಕ ಹುದ್ದೆಯಲ್ಲಿದ್ದಾರೆ.  ಜಲದಾಹದಿಂದ ತತ್ತರಿಸುತ್ತಿರುವ ಜಗತ್ತಿಗೆ ಇಸ್ರೇಲ್‌ನ ಪರಿಹಾರದ ಕುರಿತು ‘ಸೇತ್ ಎಂ. ಸಿಗೆಲ್’ ಅವರು ರಚಿಸಿರುವ ‘ನಾಳೆಗೂ ಇರಲಿ ...

READ MORE

Related Books