About the Author

ಮೂಲತಃ ಕೋಲಾರ ಜಿಲ್ಲೆಯವರಾದ ರವಿ ತಿರುಮಲೈ ಅವರು ವಾಣಿಜ್ಯ ಪದವಿ ಪಡೆದು ಎರಡು ದಶಕಗಳ ಕಾಲ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪ್ರೇಮ ಇವರ ನಿರಂತರ ಅಧ್ಯಯನ, ಅನುವಾದ ಕಾರ್ಯ, ಕವನ ರಚನೆ, ರಂಗಭೂಮಿ, ಹಳೆಯ ಚಿತ್ರ ಸಂಗೀತ ಹೀಗೆ ವೈವಿಧ್ಯಮಯ ಆಸಕ್ತಿಯನ್ನು ತಳೆದವರು.

ಸಾಹಿತಿ ಡಿ.ವಿ ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗ ಕುರಿತಾದ ವ್ಯಾಖ್ಯಾನಗಳನ್ನು ಮೂರು ಬೃಹತ್ ಸಂಪುಟಗಳಲ್ಲಿ ’ ಕಗ್ಗ ರಸಧಾರೆ’ ಎಂಬ ಶೀರ್ಷಿಕೆಯಡಿ ಹೊರತಂದಿದ್ದಾರೆ.  ವ್ಯಾಖ್ಯಾನ, ಚಿಂತನೆಗಳ ಕುರಿತಾದ ಇವರ ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

 

ರವಿ ತಿರುಮಲೈ