About the Author

ರವೀಂದ್ರ ಸಿಂಗ್ ಅವರು ಎಂ.ಎ. ಪದವೀಧರರು. ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡವಲಗಮಾದಿ ಅಂಚೆ ವ್ಯಾಪ್ತಿಯ ಬೂರಮಾಕನಹಳ್ಳಿಯವರು. 1977ರ ಜುಲೈ 26 ರಂದು ಜನನ. ಸದ್ಯ, ಕೋಲಾರದ ಆದರ್ಶ ಕಾಲೇಜಿನಲ್ಲಿ ವ್ಯವಸ್ಥಾಪಕರು. ಋತುಗಾನ, ಕಪ್ಪು ಫ್ರೇಮಿನ ಕನ್ನಡಕ (ಕವನ ಸಂಕಲನಗಳು), ದಿಕ್ಕಾಪಾಲು -ಕಾದಂಬರಿ ಹಾಗೂ ಗುಣ ಸಂಪನ್ನ-ಕಥಾ ಸಂಕಲನ ಪ್ರಕಟಗೊಂಡಿವೆ. ರಾಜ್ಯ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ವಿಶೇಷ ಸಂಚಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಕನ್ನಡ ಸಾಂಸ್ಕೃತಿಕ ಅಕಾಡೆಮಿಯಿಂದ (2007) ಸಾಹಿತ್ಯ ರತ್ನ, ತಾಯ್ನಾಡು ಕನ್ನಡ ರಕ್ಷಣಾ ವೇದಿಕೆ ಬೆಂಗಳೂರು ವತಿಯಿಂದ ಭಾರತ ರತ್ನ ಸರ್ . ಎಂ. ವಿಶ್ವೇಶ್ವರಯ್ಯ ಪ್ರಶಸ್ತಿ ಹೀಗೆ ಅನೇಕ ಪ್ರಶಸ್ತಿಗಳು ಸಂದಿವೆ. ಚುಟುಕು ಸಾಹಿತ್ಯ ಪರಿಷತ್ತು, ಸಿರಿಗನ್ನಡ ವೇದಿಕೆ ಹೀಗೆ ಹತ್ತು ಹಲವು ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

 

ರವೀಂದ್ರ ಸಿಂಗ್

(26 Jul 1977)