About the Author

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿ ಇಲ್ಲಿ ಜಾನಪದ ಶಾಸ್ತ್ರ ಮತ್ತು ಬುಡಕಟ್ಟು ಅಧ್ಯಯನ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರು. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಶಿರ್ಲಾಲು ಗ್ರಾಮದವರು. 2005ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನು ಪೂರೈಸಿರುತ್ತಾರೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಫಿಲ್. ಹಾಗೂ ಪಿಎಚ್.ಡಿ ಪದವಿಯನ್ನು ಪಡೆದಿದ್ದಾರೆ ಅನೇಕ ರಾಷ್ಟ್ರೀಯ – ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಪ್ರಬಂಧ ಮಂಡಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದಿಂದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ನೇಮಕಗೊಂಡಿರುವ ಇವರು ಯುವ ತಲೆಮಾರಿನ ಭರವಸೆಯ ಲೇಖಕರು. ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕೊಡಮಾಡಿದ 2019ರ ಮೊದಲ ‘ವಾಗ್ದೇವಿ ಪ್ರಶಸ್ತಿ’ ಪುರಸ್ಕೃತರು.

ಇವರ ಸಂಶೋಧನಾ ಲೇಖನಗಳು ಹಲವು ಸಂಶೋಧನಾ ನಿಯತಕಾಲಿಕಗಳಲ್ಲಿ ಪ್ರಕಟವಾಗಿದ್ದು, ಹಲವು ದಿನಪತ್ರಿಕೆಗಳಲ್ಲಿ ವೈಚಾರಿಕ ಬರಹಗಳು ಪ್ರಕಟವಾಗಿದೆ. ಪ್ರಸ್ತುತ ವಿಜಯ ಕರ್ನಾಟಕ  ದಿನಪತ್ರಿಕೆಯ  ಅಂಕಣಕಾರರಾಗಿದ್ದಾರೆ. ಇವರ ಮೊದಲ ಸಂಶೋಧನಾ ಲೇಖನಗಳ ಸಂಕಲನ ‘ಸಾಹಿತ್ಯ ವಿಚಾರ’ ಕ್ಕೆ 2016ರ ‘ಬೇಂದ್ರೆ ಗ್ರಂಥ ಪುರಸ್ಕಾರ’ ಲಭಿಸಿದೆ .’ಕನ್ನಡವೂ ಭಾರತವೂ ಜಗವೆಲ್ಲವೂ ಒಂದೇ’, ‘ಜಲಿಯನ್‌ವಾಲಾ ಬಾಗ್ ಹತ್ಯಾಕಾಂಡ’ ಸೇರಿದಂತೆ ಒಟ್ಟು 5 ಕೃತಿಗಳು ಪ್ರಕಟವಾಗಿದೆ. ಇತ್ತೀಚೆಗೆ ಕರ್ನಾಟಕ ಸರ್ಕಾರದ ಕುವೆಂಪು ಭಾಷಾಭಾರತಿ ಪ್ರಾಧಿಕಾರ ಕುವೆಂಪು ಸಾಹಿತ್ಯ ಅಧ್ಯಯನಕ್ಕಾಗಿ ಕುವೆಂಪು ಹಿರಿಯ ಫೆಲೋಶಿಪ್ ನೀಡಿದೆ.

ರೋಹಿಣಾಕ್ಷ ಶಿರ್ಲಾಲು