About the Author

ಸ. ಹರೀಶ್ ಅವರು ಬೆಂಗಳೂರಿನವರು. ಚಲನಚಿತ್ರ ನಿರ್ದೇಶಕರು, ಟೀವಿ ಧಾರಾವಾಹಿ ಲೇಖಕರು ಹಾಗೂ ಕಾದಂಬರಿಕಾರರು ಹಾಗೂ ಚಲನಚಿತ್ರ ನಿರ್ಮಾಪಕರು. ಕನ್ನಡದಲ್ಲಿ ಎಂ.ಎ ಪದವಿ ಹಾಗೂ ಡಿ.ಫಾರ್ಮ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ. 1970 ಜುಲೈ 18ರಂದು ಜನನ. ಕನ್ನಡದ ಹೆಸರಾಂತ ನಿಯತಕಾಲಿಕೆಗಳಾದ ಪ್ರಜಾವಾಣಿ, ಸುಧಾ, ವಾರಪತ್ರಿಕೆ, ಪ್ರಜಾಮತ, ಮಂಗಳ ಮುಂತಾದ ಪತ್ರಿಕೆಗಳಿಗೆ ಸಣ್ಣಕತೆ, ಕವನ ಮತ್ತು ಕಾದಂಬರಿ ಬರೆದಿದ್ದಾರೆ.  

ನ್ಯಾಯಿಗೆರೆ ಹಾಗೂ ಧನ್ಯವಾದ ಚಲನಚಿತ್ರಗಳ ನಿರ್ದೇಶನ, ಮಾಯಾಬಜಾರ್, ಪಾಪಿಗಳ ಲೋಕದಲ್ಲಿ, ನೀ ಮುಡಿದ ಮಲ್ಲಿಗೆ, ನಾನೇ ರಾಜ ಇತ್ಯಾದಿ ಚಲನಚಿತ್ರಗಳಿಗೆ ಗೀತೆಯ ರಚನೆ ಮಾಡಿದ್ದಾರೆ. ಕರ್ನಾಟಕ ಸರ್ಕಾರ. ವಾರ್ತಾ ಇಲಾಖೆ, ಶಿಕ್ಷಣ ಭೀಷ್ಮ, ಡಾ.ಎಚ್.ಎಮ್ ಗಂಗಾಧರಯ್ಯನ ಕುರಿತು 15 ನಿಮಿಷಗಳ ಸಾಕ್ಷ್ಯ ರಚನೆ ಮಾಡಿದ್ದಾರೆ. ಹಲವಾರು ಸಿನಿಮಾಗಳಿಗೂ ಇವರು ಸ್ಕ್ರೀಪ್ಟ್ ರಚನೆಯನ್ನು ಮಾಡಿರುತ್ತಾರೆ. ಸುಮಾರು 6500ಕ್ಕೂ ಹೆಚ್ಚು ಕಂತುಗಳಿಗೆ ಕತೆ, ಚಿತ್ರಕತೆ, ಸಂಭಾಷಣೆಯನ್ನು ಬರೆದಿರುತ್ತಾರೆ.

ಕೃತಿಗಳು: ಬೊಗಸೆ ತುಂಬಾ ಪ್ರೀತಿ, ನೀನೆಲ್ಲಿ ನಡೆವೆ ದೂರ

ಸ. ಹರೀಶ್