About the Author

ರಂಗಭೂಮಿಯ ನಿರ್ದೇಶಕರಾಗಿರುವ ಎಸ್‌. ರಘುನಂದನ ಅವರು ಕವಿ-ನಾಟಕಕಾರ ಕೂಡ. ರಂಗಭೂಮಿಯ ಕಲಾವಿದರಾಗಿ-ನಿರ್ದೇಶಕರಾಗಿ ಗಣನೀಯ ಸಾಧನೆ ಮಾಡಿರುವ ರಘುನಂದನ ಕನ್ನಡದ ಅಪರೂಪದ ಚಿಂತಕ-ಲೇಖಕ. ರಘುನಂದನ ಅವರ ಕೊಡುಗೆಯನ್ನ ಗಮನಿಸಿ  ಕೇಂದ್ರ ಸಂಗೀತ ನಾಟಕ ಅಕಾಡೆಮಿಯು 2018ನೇ ಸಾಲಿನ ಪ್ರಶಸ್ತಿ ನೀಡಿ ಗೌರವಿಸಿತ್ತು. ದೇಶದಲ್ಲಿ ಹೆಚ್ಚುತ್ತಿರುವ ಅಸಹನೆ, ಕೋಮುದ್ವೇಷ, ವಿದ್ಯಾರ್ಥಿಗಳ ಮೇಲಿನ ಹಲ್ಲೆ-ದಾಳಿಗಳ ಹಿನ್ನೆಲೆಯಲ್ಲಿ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದರು. ನಿರಾಕರಿಸುವ ಸಂದರ್ಭದಲ್ಲಿ ’ಇದು ಪ್ರತಿಭಟನೆಯಲ್ಲ; ವ್ಯಥೆ; ಸ್ವೀಕರಿಸಲಾಗದ ಅಸಹಾಯಕತೆ’ ಎಂದು ಅಭಿಪ್ರಾಯಪಟ್ಟಿದ್ದರು.

ಎಸ್‌. ರಘುನಂದನ