About the Author

ಪ್ರೊ. ಎಸ್.ವಿ. ಉದಯಕುಮಾರ ಶೆಟ್ಟಿ ಅವರು ಮಣಿಪಾಲದ ಎಂ.ಐ.ಟಿ ತಾಂತ್ರಿಕ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಯಕ್ಷಗಾನ ಭಾಗವತರು, ವೇಷಧಾರಿ, ಚೆಂಡೆವಾದಕರು, ಯಕ್ಷಗಾನ ಲೇಖಕರು, ಚಿಂತಕರು ಮತ್ತು ವಿಮರ್ಶಕರು ಆಗಿದ್ದಾರೆ. ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಎಂ.ಟೆಕ್. ಪದವಿ ಪಡೆದ ಇವರು ಯಕ್ಷಗಾನ ಕ್ಷೇತ್ರದಲ್ಲಿ ಕೃಷಿ ಮಾಡಿದ್ದು ವಿಶೇಷ. ಬಡಗು ತಿಟ್ಟಿನ ಹವ್ಯಾಸಿ ಯಕ್ಷಗಾನ ರಂಗಭೂಮಿಯ 'ದಶಾವತಾರಿ' ಎಂದು ಜನ ಇವರನ್ನು ಗುರುತಿಸಿದ್ದಾರೆ. ಇವರ ಯಕ್ಷಗಾನ ಸಂಬಂಧಿ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಮತ್ತು ವಿವಿಧ ಸ್ಮರಣ ಸಂಚಿಕೆಯ ಪುಟಗಳನ್ನು ಅಲಂಕರಿಸಿವೆ. ಇವರಿಗೆ 2009ರ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೀತಾನದಿ ಗಣಪಯ್ಯ ಶೆಟ್ಟಿ ಪ್ರಶಸ್ತಿ, ಬೈಕಾಡಿ ಕೃಷ್ಣಯ್ಯ ಸ್ಮಾರಕ ಯಕ್ಷಶ್ರೀ ಪ್ರಶಸ್ತಿ ಸಹಿತ ಹಲವಾರು ಸಂಘ, ಸಂಸ್ಥೆ ಮತ್ತು ಮೇಳಗಳ ವೇದಿಕೆಯಲ್ಲಿ ಸನ್ಮಾನ ಸಂದಿದೆ.

 

ಎಸ್. ವಿ. ಉದಯ ಕುಮಾರ ಶೆಟ್ಟಿ