About the Author

ಸದಾನಂದ ಹೆಗಡೆ ಹರಗಿ ಅವರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದವರು. ವೃತ್ತಿಯಲ್ಲಿ ಪತ್ರಕರ್ತರು. ಧಾರವಾಡದಲ್ಲಿ ಬಿಎಸ್ಸಿ ಪದವಿಯನ್ನು ಪೂರೈಸಿರುವ ಅವರು ಮೈಸೂರಿನಲ್ಲಿ ಎಂ.ಎ ಸೈಕಾಲಜಿ ಪದವಿಯನ್ನು ಪಡೆದಿರುತ್ತಾರೆ. ಉತ್ತರ ಕರ್ನಾಟಕದ ಬೆಳಗಾವಿ, ವಿಜಾಪುರದಲ್ಲಿ ಕೆಲಕಾಲ ಮಾರುಕಟ್ಟೆ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಯಕ್ಷಗಾನ ಅವರ ಆಸಕ್ತಿ ಕ್ಷೇತ್ರವಾಗಿದ್ದು, ತೆಂಕುತಿಟ್ಟಿನ ದೇವೀ ಮಹಾತ್ಮೆ ಕುರಿತು ಕಾಫಿಟೇಬಲ್ ಪುಸ್ತಕವನ್ನು ಹೊರ ತಂದಿದ್ದಾರೆ. ಚಿತ್ರಕಲೆ, ಏಕ ವ್ಯಕ್ತಿ ಪ್ರದರ್ಶನ ಅವರ ಹವ್ಯಾಸ. ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ಇವರ ನೇತೃತ್ವದಲ್ಲಿ ಚಿತ್ರಕಲಾ ಪರಿಷತ್ತು ಹೊರತಂದ ಸ್ವಸ್ತಿ ಅರ್ಟ್ ಬುಲೆಟಿನ್ ಗಮನ ಸೆಳೆದಿರುತ್ತದೆ. ದಾವಣಗೆರೆಯಲ್ಲಿ ಚಿತ್ರಕಲಾ ಪರಿಷತ್ತು ಎಂಬ ಸಂಘಟನೆ ಸ್ಥಾಪಿಸಿ, ಮಧ್ಯಕರ್ನಾಟಕದಲ್ಲಿ ಕಲಾವಿದರನ್ನು ಸಂಘಟಿಸಿ, "ಚಿತ್ರಸಂತೆ " ಮಾಡುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಕೃತಿಗಳು: ನೀನೆ ಅರಸು, ಎಸ್ ಯು ವಿ

ಸದಾನಂದ ಹೆಗಡೆ ಹರಗಿ