About the Author

ಸಮಾಜಶಾಸ್ತ್ರ ಮತ್ತು ತತ್ವಶಾಸ್ತ್ರ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಗಳನ್ನೂ, ಸಮಾಜಶಾಸ್ತ್ರದಲ್ಲಿ ಪಿಹೆಚ್ ಡಿ ಪದವಿಯನ್ನೂ ಪಡೆದಿದ್ದು, ಪ್ರಸ್ತುತ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ‘ಭಾರತದ ಆದಿವಾಸಿ ಕಥನ-ಆಸ್ಮಿತೆ ಮತ್ತು ಅಸಮಾನತೆ' (2020) ಎಂಬ ಮಸ್ತಕವನ್ನು ಸಂಪಾದಿಸಿದ್ದು, 'ಋತ' ಕನ್ನಡ ಜರ್ನಲ್‌ನ ಸಹ ಸಂಪಾದಕರಾಗಿದ್ದಾರೆ. ಕನ್ನಡ ವಿಶ್ವವಿದ್ಯಾನಿಲಯದ 'ಬುಡಕಟ್ಟು ಅಧ್ಯಯನ' ನಿಯತಕಾಲಕೆಯ ವಿಷಯ ತಜ್ಞ ಪರಿಶೀಲನಾ ಸಮಿತಿಯ ಸದಸ್ಯರೂ ಆಗಿರುವ ಇವರ ಅನೇಕ ಲೇಖನಗಳು ಮತ್ತು ಬರಹಗಳು ಹಲವಾರು ದಿನಪತ್ರಿಕೆಗಳು, ನಿಯತಕಾಲಿಕಗಳು ಹಾಗು ಜರ್ನಲ್‌ಗಳಲ್ಲಿ ಪ್ರಕಟವಾಗಿವೆ. ಸಂಶೋಧನೆ, ಚಿಂತನೆ, ಬರವಣಿಗೆ ಹಾಗು ಗ್ರಂಥ ಸಂಪಾದನೆಗಳಲ್ಲಿ ಸಕ್ರಿಯವಾಗಿರುವ ಇವರು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಸಂಯೋಜನಾಧಿಕಾರಿಯೂ ಆಗಿದ್ದಾರೆ.

ಕೃತಿ: ಭ್ರಮೆ ಮತ್ತು ವಾಸ್ತವಗಳ ನಡುವೆ (ಅನುವಾದ)

ಸಂತೋಷ್ ನಾಯಕ್ ಆರ್