About the Author

ಕತೆಗಾರ್ತಿ ಸರಿತಾ ನವಲಿ ಮೂಲತಃ ಹೈದ್ರಾಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಯ ಗಂಗಾವತಿಯ ನವಲಿ ಗ್ರಾಮದವರು. ತಮ್ಮ ಶಾಲಾ ಶಿಕ್ಷಣವನ್ನು ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ಪೂರೈಸಿ ಕಾಲೇಜು ಮತ್ತು ಸ್ನಾತಕೋತ್ತರ ಪದವಿಯನ್ನು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪಡೆದರು.  2004ರಲ್ಲಿ ಭಾರತದಿಂದ ಅಮೆರಿಕಾ ರಾಜ್ಯದ ಫೀನಿಕ್ಸ್‌ಗೆ ತೆರಳಿ ನಂತರ 2005ರಿಂದ ತಮ್ಮ ಪತಿ ಮತ್ತು ಮಗನೊಂದಿಗೆ ನ್ಯೂ ಜೆರ್ಸಿಯಲ್ಲಿ ನೆಲೆಸಿದ್ದಾರೆ. ನ್ಯೂ ಜೆರ್ಸಿಯಲ್ಲಿ 2014 ರಲ್ಲಿ 'ಬೃಂದಾವನ ಕನ್ನಡ ಕೂಟ’ದ  ದೈಮಾಸಿಕ ಪತ್ರಿಕೆ `ಬೃಂದಾವನ ವಾಣಿ'ಯ ಸಂಪಾದಕಿಯಾಗಿದ್ದರು. ಹಲವಾರು ಕತೆ, ಕವಿತೆಗಳು ಕನ್ನಡದ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಕನ್ನಡ ನೃತ್ಯ ರೂಪಕಗಳ ಪರಿಕಲ್ಪನೆ-ಸಂಭಾಷಣೆ, ನಿರೂಪಣೆ, ನಾಟಕ ಅನುವಾದ, ನಟನೆ ಮತ್ತು ನಿರ್ದೇಶನದಲ್ಲಿಯೂ ಆಸಕ್ತಿ ಇದ್ದು, ‘ಆವನಾವನು ಕಾಯ್ದ' ಅವರ ಮೊದಲ ಕಥಾ ಸಂಕಲನ.

ಸರಿತಾ ನವಲಿ