About the Author

ಶಾನ್ ಕಾಸರಗೋಡು ಎಂದೇ ಜನಪ್ರಿಯರಾದ ಕಲಾವಿದ ಕೆ. ವಿಷ್ಣು ಶ್ಯಾನುಭೋಗ್, ವೈಶಿಷ್ಟ್ಯಪೂರ್ಣ, ವೈವಿಧ್ಯಮಯ ಬರಹಗಳ ಮೂಲಕ ಸಾಹಿತ್ಯ ಕ್ಷೇತ್ರದಲ್ಲೂ ಗಮನ ಸೆಳೆದಿದ್ದಾರೆ.

ಪತ್ರಿಕೆಗಳಲ್ಲಿ, ಸ್ಮರಣ ಸಂಚಿಕೆಗಳಲ್ಲಿ ಅವರ ಲೇಖನಗಳು ಪ್ರಕಟವಾಗಿವೆ. ಬಹುಮುಖ ಪ್ರತಿಭೆಯ ಕಲಾವಿದ ಕೂಡ್ಲು ಗೋಪಾಲಕೃಷ್ಣ ಶ್ಯಾನುಭಾಗರ ಪುತ್ರ ಶಾನ್, ಕಳೆದ ಮೂರು ದಶಕಗಳಿಂದ ಉತ್ತರ ಮಲಬಾರ್ ಗ್ರಾಮೀಣ ಬ್ಯಾಂಕಿನ ಉದ್ಯೋಗಿಯಾಗಿದ್ದಾರೆ. ಸಂಗೀತ-ಚಿತ್ರ ಕಲೆಯಲ್ಲಿ ಆಸಕ್ತಿ ಇದೆ. ಕೂಡ್ಲು ಶ್ಯಾನುಭೋಗ ಮನೆತನದ ಹಿರಿಯ ತಲೆಮಾರಿನ ಸಾಧನೆ-ಕೃತಿಗಳು ಶಾನ್ ಅವರಿಗೆ ಸ್ಫೂರ್ತಿ ಮತ್ತು ಪ್ರೇರಣೆಯಾಗಿದ್ದು ಗಮನಿಸಬಹುದು. 

ಶಾನ್ ಕಾಸರಗೋಡು(ಕೆ. ವಿಷ್ಣು ಶ್ಯಾನುಭೋಗ್)