About the Author

ಲೇಖಕ ಶರಣಪ್ಪ ಜಿ.ಚಟ್ಟಿ ( ಶರಣು ಚಟ್ಟಿ) ಅವರು ಮೂಲತಃ ವಿಜಯಪುರ ಜಿಲ್ಲೆ,ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದವರು. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎ, ಕುವೆಂಪು ವಿಶ್ವವಿದ್ಯಾಲಯದಿಂದ ಎಂಎ ಹಾಗೂ ಸಿಂದಗಿಯ ಪದ್ಮರಾಜ ಡಿ.ಇಡಿ ಕಾಲೇಜಿನಿಂದ ಡಿ.ಇಡಿ ಪದವಿ ಪಡೆದಿದ್ದಾರೆ. ಗೋಲಗೇರಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶೀಕ್ಷಕರು. ಸಾಹಿತಿ, ವ್ಯಂಗ್ಯಚಿತ್ರಕಾರರು ಹಾಗೂ ಗಾಯಕರು.

ಕೃತಿಗಳು: ತುಂಟ ಮಕ್ಕಳು (ಕವನ ಸಂಕಲನ-2021)

ಪ್ರಶಸ್ತಿ-ಪುರಸ್ಕಾರಗಳು: ಕರ್ನಾಟಕ ಬಾಲವಿಕಾಸ ಅಕಾಡೆಮಿಯಿಂದ ರಾಜ್ಯ ಪ್ರಶಸ್ತಿ, ಬಾಗೇವಾಡಿಯ ಆರೂಢ ಶ್ರೀ ಪ್ರಶಸ್ತಿ, ಮುದ್ದೆಬಿಹಾಳ ತಾಲೂಕಿನ ಇಂಗಳಗೇರಿಯ ಕರುನಾಡ ಗುರುಶ್ರೇಷ್ಠ ಪ್ರಶಸ್ತಿ, ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕನ್ನೆಳ್ಳಿಯ ಸಗರನಾಡು ಯುವ ಚೇತನ ಪ್ರಶಸ್ತಿ, ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ರಾಯಚೂರು ಘಟಕದಿಂದ  ಮಕ್ಕಳ ಮಾಣಿಕ್ಯ ಪ್ರಶಸ್ತಿ, ವಿಜಯಪುರದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಜ್ಯೋತಿಬಾ ಫುಲೆ ಪ್ರಶಸ್ತಿ, ಸಿಂದಗಿಯ ಮಂದಾರ ಸಿರಿ ಆದರ್ಶ ಶಿಕ್ಷಕ ಪ್ರಶಸ್ತಿಗಳು ಸಂದಿವೆ. 

ಶರಣಪ್ಪ ಜಿ.ಚಟ್ಟಿ ( ಶರಣು ಚಟ್ಟಿ)

(21 Oct 1987)