About the Author

ಲೇಖಕ ಶರಣು ಆತನೂರ ಅವರು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಜೇವರ್ಗಿ (ಬಿ) ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಅಫಜಲಪುರದಲ್ಲಿ ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದರು. ಅಫಜಲಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕೋಶಾಧ್ಯಕ್ಷರಾಗಿ, ಉದಯೋನ್ಮುಖ ಬರಹಗಾರ ಬಳಗದ ಕಾರ್ಯದರ್ಶಿಯಾಗಿ, ಸಾಕ್ಷರತಾ ಗ್ರಾಮ ಸೇನಾನಿಯಾಗಿಯೂ ಸೇವೆ ಸಲ್ಲಿಸಿದ್ದು, ಸದ್ಯ, ಕಲಬುರಗಿ ಮಹಾನಗರ ಪಾಲಿಕೆಯ ತಾತ್ಕಾಲಿಕ ಕರ್ಮಚಾರಿಗಳ ಮೇಲ್ವೀಚಾರಕರಾಗಿ ಕೆಲಸ ನಿರ್ವಹಿಸುತ್ತಿದ್ದು, ಕರ್ನಾಟಕ ಪೌರ ಕಾರ್ಮಿಕರ ಮಹಾಸಂಘದ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಇವರು ಬರೆದ ಕವಿತೆಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಕೃತಿಗಳು: ಒಡಲ ನೋವಿನ ದನಿ (ಕವನ ಸಂಕಲನ)

ಪ್ರಶಸ್ತಿ-ಪುರಸ್ಕಾರಗಳು: ಸುವರ್ಣಸಿರಿ ಪ್ರಶಸ್ತಿ, ಬುದ್ಧ ಭಾರತ ರತ್ನ ಪ್ರಶಸ್ತಿ, ಕಲ್ಯಾನ ಕರ್ನಾಟಕ  ಬಸವ ಪುರಸ್ಕಾರ ಸಂದಿದೆ. 

ಶರಣು ಆತನೂರ