About the Author

ಶಶಿಧರ ನರೇಂದ್ರ ಅವರು ನಟ ನಿರ್ದೇಶಕ, ನಾಟಕಕಾರರು. ಆಕಾಶವಾಣಿ ಧಾರವಾಡದ ಹಿರಿಯ ಉದ್ಯೋಷಕರು. ನೂರಾರು ರಂಗ ಹಾಗೂ ರೇಡಿಯೋ ನಾಟಕಗಳಲ್ಲಿ ಅಭಿನಯಿಸಿ 50ಕ್ಕೂ ಹೆಚ್ಚು ರಂಗ ನಾಟಕಗಳ ನಿರ್ದೇಶನ ಮಾಡಿದ್ದಾರೆ. ಉಪಮನ್ಯು, ಒಳ್ಳೇದಲ್ಲ ನಿನ್ನ ಸಲಗಿ, ಎಲ್ಲಿರುವನೋ ರಂಗ, ಇತಿಹಾಸ (ಅನು) ನಾಟಕಗಳು ಪ್ರಕಟವಾಗಿವೆ. ಎನ್ಕೆ ಅವರ ಗಾಂಧೀಗೀತೆಯನ್ನು ಸಂಪಾದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ 'ಮನ್ ಕೀ ಬಾತ್' ಅನ್ನು ಐದು ಸಂಪುಕಗಳಲ್ಲಿ ಅನುವಾದಿಸಿದ್ದಾರೆ. 'ಕನ್ನಡ ನಾಟಕಗಳ ಭಾಷೆ' ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದಿದ್ದಾರೆ.

ಶಶಿಧರ ನರೇಂದ್ರ