About the Author

ಶಿಲ್ಪ ಕೆಸಿ. ಮೂಲತಃ ಶಿವಮೊಗ್ಗ ಜಿಲ್ಲೆಯ ಕುಂಸಿಯವರು. ತಂದೆ ಕೆ.ಎಂ. ಚಂದ್ರಯ್ಯ. ತಾಯಿ ಹಾಲಮ್ಮ. ವೃತ್ತಿಯಲ್ಲಿ ಹಿಂದಿ ಶಿಕ್ಷಕಿಯಾಗಿರುವ ಶಿಲ್ಪ ಅನೇಕ ಸ್ವರಚಿತ ಹಾಡುಗಳನ್ನು ರಚಿಸಿ ಸ್ವ ರಾಗ ಸಂಯೋಜನೆ ಮಾಡಿ ಹಾಡುವ ಹವ್ಯಾಸವನ್ನು ಹೊಂದಿದ್ದಾರೆ. ಕವನ, ಹನಿಗವನ, ಚುಟುಕು,ಜಡೆ ಕವನ,ರುಬಾಯಿ ಟಂಕಾ ಹಾಯ್ಕು, ಗಜಲ್ಗಳ, ಕವಿತೆ ರಚನೆಗಳನ್ನು ಮಾಡಿದ್ದಾರೆ.

ಪ್ರಶಸ್ತಿಗಳು: ಇಂದಿರಾ ರಾಜ್ಯ ಪ್ರಶಸ್ತಿ, ಡಾ ಎಸ್ ರಾಧಾಕೃಷ್ಣನ್ ರಾಷ್ಟ್ರೀಯ ಶಿಕ್ಷಕ ರತ್ನ ಪ್ರಶಸ್ತಿ, ವಿಶ್ವ ಕನ್ನಡ ಸಾಹಿತ್ಯ ರತ್ನ ಪ್ರಶಸ್ತಿ, ಕವಿ ವಿಭೂಷಣ ಪ್ರಶಸ್ತಿ

ಕೃತಿಗಳು: ಭರವಸೆಯ ಬೇರು

ಶಿಲ್ಪ ಕೆಸಿ