About the Author

ಲೇಖಕ ಶಿವಮನ್ಯು ಪಾಟೀಲರು ಅವರು ಮೂಲತಃ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳದವರು.  ಎಂಜಿನಿಯರಂಗ್ (ಸಿವಿಲ್) ಪದವೀಧರರು.‘ ಸ್ಕೈ’  ಎಂಜಿನಿಯರ್‍ಸ್ ಕಂಪನಿಯ ಪ್ರಧಾನ ವ್ಯವಸ್ಥಾಪಕರು. ಸಾಹಿತ್ಯಕವಾಗಿಯೂ ತೊಡಗಿಸಿಕೊಂಡಿದ್ದಾರೆ.  

ಕೃತಿಗಳು : ಪ್ರೇಮಾಂಕುರ ( ಕವನ ಸಂಕಲನ ), ಭಾವಾಂಕುರ ( ಕವನ ಸಂಕಲನ ), ನಾಟಕಗಳು: ದ್ರೋಹದ ದೊರೆ, ಆಗಸ್ಥಿಕೆ, ವೇದಾಂತ - ಸಿದ್ದಾಂತ  ಕನ್ನಡ ಹುಲಿ.

ಪ್ರಶಸ್ತಿ-ಪುರಸ್ಕಾರಗಳು:  ದ್ರೋಹದ ದೊರೆ  ನಾಟಕಕ್ಕೆ ಮುಂಬಯಿ ಕನ್ನಡ ಸಂಘದಿಂದ ಮೊದಲ ಪ್ರಶಸ್ತಿ., ಆಗಸ್ಥಿಕೆ ನಾಟಕಕ್ಕೆ ರಂಗಾಂತರಂಗದವರಿಂದ ಉತ್ತಮ ನಾಟಕ ಪ್ರಶಸ್ತಿ., ಬೆಳಕು ಮಾರುವವರು ಕಥೆಗೆ ಕುವೆಂಪು ಕಲಾವೇದಿಕೆ ಮೈಸೂರು ಇವರಿಂದ ಪ್ರಶಸ್ತಿ, ಉಡುಗೊರೆ ಎಂಬ ಕಥೆಯು ಕರ್ನಾಟಕ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ ಕಥಾ ಸ್ಪರ್ಧೆಯಲ್ಲಿ ಉತ್ತಮ ಕಥೆಯ ಪ್ರಂಶಸೆ, ಅಲೆಮಾರಿಯ ಬದುಕು ಎಂಬ ಕವನವು ಬೆಂಕಿಯ ಬಲೆ ಪತ್ರಿಕೆಯವರು ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ., ನಿಜ ನಾಯಕ ಎಂಬ ಕವನಕ್ಕೆ ಸುನಂದಾ ಸಾಹಿತ್ಯ ವೇದಿಕೆಯಿಂದ ಪ್ರಥಮ ಬಹುಮಾನ.


 

 

ಶಿವಮನ್ಯು ಪಾಟೀಲ