About the Author

ಶೋಭಾ ಹೆಗಡೆ ಅವರು ಹುಟ್ಟಿ ಬೆಳೆದಿದ್ದು ಉತ್ತರಕನ್ನಡ ಜಿಲ್ಲೆಯ ಶಿರಸಿ ತಾಲ್ಲೂಕಿನ ತುಂಬೆಮನೆಯಲ್ಲಿ. ಎಳವೆಯಲ್ಲೇ ಸಾಂಸ್ಕೃತಿಕ ಮತ್ತು ಸಾಹಿತ್ಯ ವಾತಾವರಣದ ಪ್ರಭಾವ ಗಾಢವಾಗಿದ್ದರಿಂದ ಓದು ಮತ್ತು ಬರವಣಿಗೆ ಜೊತೆಯಲ್ಲೇ ಸಾಗುತ್ತ ಈಗ ಅಂಕಣಕಾರ್ತಿ ಹಾಗೂ ಕಾದಂಬರಿಯಾಗಿ ಮೈದಳೆದಿದ್ದಾರೆ. ಸುಮಾರು ಇಪ್ಪತ್ತು ವರ್ಷಗಳ ಕಾಲ ಆಕಾಶವಾಣಿ ಮತ್ತು ದೂರದರ್ಶನದ ಕಾರ್ಯಕ್ರಮಗಳ ನಿರೂಪಣೆ, ನಿರ್ವಹಣೆ ಮತ್ತು ಆಯೋಜನೆಯಲ್ಲಿ ತೊಡಗಿಕೊಂಡು, ನೇರಪ್ರಸಾರದ ಕಾರ್ಯಕ್ರಮ `ಓ ಸಖಿ'ಯನ್ನು ನಿರ್ವಹಿಸಿದ್ದಾರೆ. `ಬೆಳಕಿನಿಂದ ಕತ್ತಲಿನೆಡೆಗೆ' ಮತ್ತು `ಆತಿಥೇಯನಾದ ಅತಿಥಿ' ಎಂಬ ಎರಡು ಕಾದಂಬರಿಗಳು ಪ್ರಕಟವಾಗಿವೆ. `ಆತಿಥೇಯನಾದ ಅತಿಥಿ' ಮಿನಿ ಕಾದಂಬರಿಯು ತರಂಗ ವಾರಪತ್ರಿಕೆಯ ಮೆಚ್ಚುಗೆಯ ಬಹುಮಾನ ಪಡೆದಿದೆ. ವಿಜಯ ಕರ್ನಾಟಕದ `ಬೋಧಿವೃಕ್ಷ' ಅಂಕಣದಲ್ಲಿ ಹಲವು ಅಧ್ಯಾತ್ಮಿಕ ಲೇಖನಗಳನ್ನು ಬರೆದ ಅನುಭವ ಇವರದ್ದು. ಪ್ರಸ್ತುತ `ಪ್ರಾಫಿಟ್ ಪ್ಲಸ್' ಎಂಬ ಸದಭಿರುಚಿಯ ಪತ್ರಿಕೆಯಲ್ಲಿ `ಅಜ್ಜನ ಅನುಭವ' ಎಂಬ ಅಂಕಣ ಪ್ರಕಟವಾಗುತ್ತಿದೆ.

ಕೃತಿಗಳು: `ಬೆಳಕಿನಿಂದ ಕತ್ತಲಿನೆಡೆಗೆ' , `ಆತಿಥೇಯನಾದ ಅತಿಥಿ' ಅವಳೆಂಬ ಸುಗಂಧ

ಶೋಭಾ ಹೆಗಡೆ

BY THE AUTHOR