About the Author

ಶ್ರೀನಿವಾಸ ಡಿ. ಶೆಟ್ಟಿ ಅವರು ವೃತ್ತಿಯಿಂದ ಪ್ರೌಢಶಾಲಾ ಗಣಿತ ಶಿಕ್ಷಕರು. ಪ್ರಸ್ತುತ ಶಿಕ್ಷಣ ಸಂಯೋಜಕರಾಗಿ ಬಿಇಓ ಕಚೇರಿ, ಅರಕಲಗೂಡು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ..

ಇದುವರೆಗೂ ಪ್ರಕಟಿತ ಕೃತಿ: ಮೌನ ಮನದ ಮಾತು (ಮನೋ ವಿಶ್ಲೇಷಣಾತ್ಮಕ ಕೃತಿ) ,ಮಧುರ ಮನಸಿನ ಅಲೆಗಳು (ಕವಿತೆಗಳು), ಮುಖವಾಡವಿಲ್ಲದ ಬದುಕು (ಕವಿತೆಗಳು), ಕರ್ನಾಟಕ ಪರಿಚಯ (ಸಾಮಾನ್ಯ ಜ್ಞಾನ), ಅನಂತದೆಡೆಗೆ (ಸಂಪಾದಿತ ಗಣಿತ ಲೇಖನಗಳು), ಗಣಿತ ಪ್ರಶಸ್ತಿಗಳು.

ಜಿಲ್ಲೆ ಮತ್ತು ರಾಜ್ಯಮಟ್ಟದ ಕವಿಗೋಷ್ಟಿಯಲ್ಲಿ ಕವಿತೆ ವಾಚಿಸಿದ್ದಾರೆ. ಜಿಲ್ಲಾ ಮತ್ತು ರಾಜ್ಯ ಪತ್ರಿಕೆಗಳಲ್ಲಿ ಲೇಖನಗಳನ್ನು ಬರೆದಿದ್ದಾರೆ. ಗಣಿತ ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಿದ್ದಾರೆ.

ಶ್ರೀನಿವಾಸ ಡಿ. ಶೆಟ್ಟಿ