About the Author

ಪತ್ರಿಕೋದ್ಯಮವನ್ನು ವೃತ್ತಿಯಾಗಿ ಆರಂಭಿಸಿದ ಶ್ರೀಕಲಾ ಡಿ.ಎಸ್ ‘ದ ಸಂಡೆ ಇಂಡಿಯನ್’ ನ್ಯೂಸ್ ಮ್ಯಾಗಜೀನ್, ‘ಕನ್ನಡಪ್ರಭ’ ಪತ್ರಿಕೆಗಳಲ್ಲಿ ಕೆಲಸ ಮಾಡಿದವರು. ಮೂಲತಃ ಮಂಗಳೂರಿನ ಕಿನ್ನಿಗೋಳಿಯವರಾದ ಇವರು ಹುಟ್ಟಿದ್ದು ೧೯೮೬ರಲ್ಲಿ. ಭರತನಾಟ್ಯ ಕಲಾವಿದೆಯೂ ಆಗಿರುವ ಶ್ರೀಕಲಾ ಸಾಹಿತ್ಯದ ಜೊತೆಗೆ ಸಾಂಸ್ಕೃತಿಕವಾಗಿಯೂ ಕ್ರಿಯಾಶೀಲರಾಗಿದ್ದಾರೆ. ಧಾರಾವಾಹಿ ಸಂಭಾಷಣೆ ಬರೆಯುವುದರಲ್ಲಿ ತೊಡಗಿಸಿಕೊಂಡಿರುವ ಅವರ ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ’ಬಾಳಂತಿ ಪುರಾಣ’ ಅವರ ಚೊಚ್ಚಲ ಕೃತಿ. 

ಶ್ರೀಕಲಾ ಡಿ.ಎಸ್