About the Author

ಲೇಖಕ ಸೂಗೂರೇಶ ಹಿರೇಮಠ ಕನ್ನಾಳ ಮೂಲತಃ ರಾಯಚೂರು (01-06-1988) ಜಿಲ್ಲೆ, ಮಸ್ಕಿ ತಾಲೂಕಿನ ಸಾ.ಕನ್ನಾಳ ಗ್ರಾಮದವರು. ಸದ್ಯ ಲಿಂಗಸೂಗೂರು ತಾಲೂಕಿನ ಕಿಲಾರಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರು. 

‘ಮುರಿದ ಟೊಂಗೆಯ ಚಿಗುರು’ ಕೃತಿಯು ಕನ್ನಡ ಪುಸ್ತಕ ಪ್ರಾಧಿಕಾರದ ಪ್ರೋತ್ಸಾಹ ಧನ ಪಡೆದು ಪ್ರಕಟವಾಗಿದೆ. ಈ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ‘ಪಂಪಮ್ಮ‌ ಶರಣೇಗೌಡ ವಿರುಪಾಪೂರ ದತ್ತಿ ಪ್ರಶಸ್ತಿ’ ದೊರಕಿದೆ. ರಾಯಚೂರು ಜಿಲ್ಲಾ ಸರಕಾರಿ ನೌಕರರ ಎನ್ ಪಿ ಎಸ್ ಸಂಘದಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. ಪ್ರಸ್ತುತ ಲಿಂಗಸೂಗೂರು ತಾಲ್ಲೂಕು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದಾರೆ. ರಾಯಚೂರು ಜಿಲ್ಲೆಯಲ್ಲೆ ಮೊದಲ ಬಾರಿಗೆ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಮಕ್ಕಳಿಗಾಗಿ ಆನ್ಲೈನ್ ಬ್ಲಾಗ್ ಆವೃತ್ತಿಯಾಗಿ 'ಚಿಣ್ಣರ ಛಾವಣಿ ಪತ್ರಿಕೆ' ಪ್ರಕಟಿಸುತ್ತಿದ್ದಾರೆ. ನಾಡಿನ ವಿವಿಧ ಪತ್ರಿಕೆಗಳಲ್ಲಿ ಅವರ ಕವನ, ಲೇಖನಗಳು ಪ್ರಕಟವಾಗಿವೆ‌.

ಸೂಗುರೇಶ ಹಿರೇಮಠ ಕನ್ನಾಳ

(01 Jun 1988)