About the Author

ಅಂಕಣಕಾರರು, ಇತಿಹಾಸ ತಜ್ಞರು ಆಗಿರುವ ಸುರೇಶ್ ಮೂನ ಅವರು ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಮೂಕನಹಳ್ಳಿಯವರು. ಬೆಂಗಳೂರಿನ ಆಚಾರ್ಯ ಪಾಠಶಾಲೆಯಲ್ಲಿ ವಿಜ್ಞಾನ ಉಪನ್ಯಾಸಕರಾಗಿದ್ದರು. ಬೆಂಗಳೂರಿನ ಇತಿಹಾಸ ಕುರಿತು ಸಂಶೋಧನೆ ನಡೆಸಿದ್ದು, ವಿದ್ಯುನ್ಮಾನ ಮಾಧ್ಯಮಗಳಲ್ಲಿ ಈ ಕುರಿತು ಉಪನ್ಯಾಸಗಳನ್ನು ನೀಡಿದ್ದಾರೆ.  ಬೆಂಗಳೂರು ನಗರ ನಿರ್ಮಾಪಕರು, ಮಹಾಮಹಿಮ ಹರಕೆ ಹನುಮ, ದಂಡಿನ ದರ್ಶನ, ಮೈಸೂರು ಬ್ಯಾಂಕ್‌ ಹೆಜ್ಜೆಗುರುತುಗಳು, ಸೇರಿ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಇವರಿಗೆ ಕೆಂಪೇಗೌಡ ಪ್ರಶಸ್ತಿ, ಆರ್ಯಭಟ ಪ್ರಶಸ್ತಿಗಳು ಲಭಿಸಿವೆ. 

ಸುರೇಶ ಮೂನ