About the Author

ಲೇಖಕ, ರಂಗಕರ್ಮಿ, ಕಲಾವಿದ ಸುಧೀರ್ ಅತ್ತಾವರ್ ಅವರು ಬಕಾವಲಿ ಹೂ ಎಂಬ ಕೃತಿಯನ್ನು ರಚಿಸಿದ್ದಾರೆ. ಆಧುನಿಕ ಶೈಲಿಯ ಒಂದು ಸಮಕಾಲೀನ ಸಂಗೀತ ನಾಟಕ 'ಬಕಾವಲಿ ಹೂ'. ಈ ನಾಟಕದ ವಸ್ತು 'ಗುಲ್ ಎ ಬಕಾವಲಿ' ಕಥಾನಕವನ್ನು ಕನ್ನಡ ನಾಟಕ ರೂಪಕ್ಕಿಳಿಸಿದ್ದಾರೆ.  ಅವರ ಹುಟ್ಟೂರು ಅತ್ತಾವರ್. ಎಂಜಿನಿಯರಿಂಗ್ ಪದವೀಧರರು. ಸಿರಿಸಂಪಿಗೆ, ಕ್ರಾಂತಿ ಬಂತು ಕ್ರಾಂತಿ ಸೇರಿದಂತೆ ಹಲವು ನಾಟಕಗಳನ್ನು ನಿರ್ದೇಶಿಸಿ, ನಟಿಸಿದ್ದಾರೆ. ಸಾಕ್ಷ್ಯಚಿತ್ರ-ಕಿರುಚಿತ್ರಗಳನ್ನೂ ನಿರ್ಮಿಸಿದ್ದು, ಚಲನಚಿತ್ರ ಗೀತ ರಚನಾಕಾರರು ಆಗಿದ್ದಾರೆ. ಇವರ ‘ಪ್ಯಾರಿ’ ಮೊದಲು ನಿರ್ದೇಶಿಸಿದ ಚಿತ್ರ. ಇವರ ‘ಬಕಾವಲಿಯ ಹೂ’ ನಾಟಕ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು (2016) ಅತ್ಯುತ್ತಮ ಕೃತಿ ಎಂದು ಪುಸ್ತಕ ಬಹುಮಾನ ನೀಡಿ ಗೌರವಿಸಿದೆ. 

ಸುಧೀರ್ ಅತ್ತಾವರ್

Awards

BY THE AUTHOR